alex Certify BIG NEWS: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿ ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿ ಯಾರು ಗೊತ್ತಾ…?

ಅಯೋಧ್ಯೆ: ಜನವರಿ 22 ರಂದು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ.

ರಾಮಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಖ್ಯಾತನಾಮರು, ಉದ್ಯಮಿಗಳು ಸೇರಿದಂತೆ ಜನಸಾಮಾನ್ಯರು ದೇಣಿಗೆ ನೀಡಿದ್ದಾರೆ. ದೇಗುಲ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನ ಖಜಾಂಚಿ ಅವರ ಪ್ರಕಾರ, ದೇವಾಲಯದ ನಿರ್ಮಾಣಕ್ಕೆ ಇದುವರೆಗೆ 1,100 ಕೋಟಿ ರೂ. ದೇಣಿಗೆ ಬಂದಿದೆ.

ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರು ಯಾರು ಗೊತ್ತಾ? ಅವರ ಹೆಸರು ಮೊರಾರಿ ಬಾಪು, ಅವರು ಆಧ್ಯಾತ್ಮಿಕ ನಾಯಕ ಮತ್ತು ಗುಜರಾತ್‌ನ ರಾಮ ಕಥಾ ನಿರೂಪಕರಾಗಿದ್ದಾರೆ.

ಅವರು ರಾಮಾಯಣವನ್ನು ಪ್ರಚುರಪಡಿಸಲು ಆರು ದಶಕಗಳನ್ನು ಕಳೆದಿದ್ದಾರೆ. ಬಾಪು ಅವರು 18.6 ಕೋಟಿ ರೂಪಾಯಿಗಳ ಗಮನಾರ್ಹ ದೇಣಿಗೆ ನೀಡಿದ್ದಾರೆ. ಅವರಿಂದ ಭಾರತದೊಳಗೆ 11.30 ಕೋಟಿ ರೂಪಾಯಿ, ಯುಕೆ ಮತ್ತು ಯುರೋಪ್‌ನಿಂದ 3.21 ಕೋಟಿ ರೂಪಾಯಿ ಮತ್ತು ಅಮೆರಿಕ, ಕೆನಡಾ ಮತ್ತು ಇತರ ದೇಶಗಳಿಂದ 4.10 ಕೋಟಿ ರೂಪಾಯಿ ದೇಣಿಗೆ ಬಂದಿದೆ.

ಆಗಸ್ಟ್ 2020 ರಲ್ಲಿ ಗುಜರಾತ್‌ನ ಪಿಥೋರಿಯಾದಲ್ಲಿ ಆನ್‌ಲೈನ್ ಕಥಾದಲ್ಲಿ ಮೊರಾರಿ ಬಾಪು ಅವರ ಹೃತ್ಪೂರ್ವಕ ಮನವಿಗೆ ಪ್ರತಿಕ್ರಿಯೆಯಾಗಿ ಉದಾರವಾದ ಹಣವನ್ನು ಕ್ರೋಢೀಕರಿಸಲಾಗಿದೆ.

ಮೊರಾರಿ ಬಾಪು ಹೇಳಿಕೆಯಲ್ಲಿ, ನಾವು ಈಗಾಗಲೇ 11.3 ಕೋಟಿ ರೂ.ಗಳನ್ನು ಸಂಗ್ರಹಿಸಿದ 15 ದಿನಗಳಲ್ಲಿ ರಾಮ ಜನ್ಮಭೂಮಿ ಟ್ರಸ್ಟ್‌ ಗೆ ಹಸ್ತಾಂತರಿಸಿದ್ದೇವೆ. ವಿದೇಶಗಳಿಂದ ಸಂಗ್ರಹಿಸಲಾದ ಉಳಿದ ಮೊತ್ತಕ್ಕೆ ಈಗ ಅಗತ್ಯವಾದ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ನೀಡಲಾಗಿದೆ. ನಾನು ಕಥಾ ಮಾಡುವಾಗ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ ಗೆ ನೀಡಿದ್ದೇನೆ. ಹಾಗಾಗಿ ಒಟ್ಟು ದೇಣಿಗೆ 18.6 ಕೋಟಿ ರೂ. ಆಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...