alex Certify ಪತಿ ವ್ಯವಹಾರಗಳ ಕುರಿತು ಅರಿವಿಲ್ಲದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ಶಿಲ್ಪಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ವ್ಯವಹಾರಗಳ ಕುರಿತು ಅರಿವಿಲ್ಲದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ಶಿಲ್ಪಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್​ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಬುಧವಾರ 1500 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಮುಂಬೈನ ಕ್ರೈಂ ಬ್ರ್ಯಾಂಚ್​​ನ ಪ್ರಾಪರ್ಟಿ ಸೆಲ್​​ಗೆ ನೀಡಿದ್ದ ಹೇಳಿಕೆಯಲ್ಲಿ ನಟಿ ಶಿಲ್ಪಾ ಶೆಟ್ಟಿ, ನಾನು ನನ್ನದೇ ಆದ ಕೆಲಸದಲ್ಲಿ ಎಷ್ಟು ನಿರತಳಾಗಿದ್ದೆ ಅಂದರೆ ನನಗೆ ಪತಿ ರಾಜ್​ ಕುಂದ್ರಾ ಯಾವ ವ್ಯವಹಾರ ನಡೆಸುತ್ತಿದ್ದರು ಎನ್ನುವುದೂ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಿಂದ ನಾನು ಕಿನಾರಾ ಬಂಗಲೆಯಲ್ಲಿ ವಾಸಿಸುತ್ತಿದ್ದೇನೆ. 2007ರಲ್ಲಿ ನಾನು ಬಿಗ್​ ಬ್ರದರ್​ ರಿಯಾಲಿಟಿ ಶೋಗೆಂದು ಬ್ರಿಟನ್​ಗೆ ತೆರಳಿದ್ದ ವೇಳೆ ರಾಜ್​ ಕುಂದ್ರಾರನ್ನು ನಿರ್ದೇಶ ಫರಾತ್​ ಹುಸೇನ್ ಮುಖಾಂತರ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಇದಾದ ಬಳಿಕ 2009ರಲ್ಲಿ ನಾನು ಹಾಗೂ ರಾಜ್​ ಕುಂದ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟೆವು. ಮದುವೆಗೂ ಮುನ್ನವೇ ನಾನು ರಾಜ್​ ಕುಂದ್ರಾ ಬಳಿ ಭಾರತದಲ್ಲೇ ನೆಲೆಸುವುದಾಗಿ ಹೇಳಿದ್ದೆ. ಇದೇ ಕಾರಣಕ್ಕೆ ನಾವು ಮದುವೆಯಾದ ಬಳಿಕವೂ ಭಾರತದಲ್ಲೇ ಉಳಿದೆವು ಎಂದು ಶಿಲ್ಪಾ ತಿಳಿಸಿದ್ದಾರೆ.

2009ರಲ್ಲಿ ರಾಜ್​ ಕುಂದ್ರಾ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಮೇಲೆ 75 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದರಲ್ಲಿ ನಾಲ್ಕು ಮಂದಿ ಅಂತಾರಾಷ್ಟ್ರೀಯ ಪಾರ್ಟ್ನರ್​ಗಳು ಇದ್ದರು. ಇದರಲ್ಲಿ ರಾಜ್​ ಕುಂದ್ರಾ ಪಾಲು 13 ಪ್ರತಿಶತವಿತ್ತು. ರಾಜ್​ ಕುಂದ್ರಾ ವಿರುದ್ಧ ಬೆಟ್ಟಿಂಗ್ ದಂಧೆ ಆರೋಪ ಕೇಳಿಬರುತ್ತಿದ್ದಂತೆಯೇ ರಾಜಸ್ಥಾನ ರಾಯಲ್ಸ್ ತಂಡದಿಂದ ಕುಂದ್ರಾ ಹೊರಬಿದ್ದಿದ್ದರು.

2012ರಲ್ಲಿ ಕುಂದ್ರಾ ಸತ್ಯಯುಗ ಗೋಲ್ಡ್​ ಪ್ರೈವೇಟ್​​​ ಲಿಮಿಟೆಡ್​ ಆರಂಭಿಸಿದ್ರು. 2015ರಲ್ಲಿ ಕುಂದ್ರಾ ವಿಯಾನ್​ ಇಂಡಸ್ಟ್ರೀಸ್​ನ್ನು ಹುಟ್ಟುಹಾಕಿದರು. ಈ ಕಂಪನಿಯಲ್ಲಿ 24.50 ಪ್ರತಿಶತ ನನ್ನ ಪಾಲು ಕೂಡ ಇದೆ. ಈ ಕಂಪನಿಯಲ್ಲಿ 7 ಮಂದಿ ಶೇರ್​ ಹೋಲ್ಡರ್​ಗಳು ಇದ್ದಾರೆ.

ರಾಜ್​ ಕುಂದ್ರಾ ವಿಯಾನ್​ ಇಂಡಸ್ಟ್ರೀಸ್​ ನಿರ್ದೇಶಕರಾಗಿದ್ದರೆ ಉಮೇಶ್​ ಕಾಮತ್ ಎಕ್ಸಿಕ್ಯೂಟಿವ್​​ ಅಸಿಸ್ಟಂಟ್​ ಆಗಿದ್ದರು. ನಾನು 2015ರಿಂದ ಕಳೆದ ವರ್ಷದವರೆಗೂ ಈ ಕಂಪನಿಯ ನಿರ್ದೇಶಕಿಯಾಗಿದ್ದೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿದೆ.

2020ರ ಡಿಸೆಂಬರ್​ ತಿಂಗಳಲ್ಲಿ ಜೆಎಲ್​ ಸ್ಟ್ರೀಮ್​ ಎಂಬ ಕಂಪನಿಯನ್ನು ಆರಂಭಿಸಲಾಯ್ತು. ಇದು ಸ್ಟ್ರೀಮಿಂಗ್​ ಅಪ್ಲಿಕೇಶನ್​, ಶಾರ್ಟ್ ವಿಡಿಯೋ ನಿರ್ಮಾಣ, ಚಾಟಿಂಗ್​ ಅಪ್ಲಿಕೇಶನ್​ಗಳನ್ನು ನಡೆಸಲು ಈ ಕಂಪನಿ ನಿರ್ಮಾಣವಾಗಿತ್ತು. ಇಲ್ಲಿ ರಾಜ್​ ಕುಂದ್ರಾ ಸಿಇಓ ಆಗಿದ್ದರು. ಇಲ್ಲಿ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದರು.

2018ರಲ್ಲಿ ನಾನು ಶಿಲ್ಪಾ ಯೋಗ ಪ್ರೈವೇಟ್​ ಲಿಮಿಟೆಡ್​ ಕಂಪನಿಯನ್ನು ಹುಟ್ಟುಹಾಕಿದೆ. ಇಲ್ಲಿಯ ಎಲ್ಲಾ ವ್ಯವಹಾರಗಳನ್ನು ಕಂಪನಿ ನಿರ್ದೇಶಕಿ ಅನಿಶಿ ಶರ್ಮಾ ನೋಡಿಕೊಳ್ಳುತ್ತಿದ್ದರು. ಮನೀಷ್​ ಕುಮಾರ್​ ಸಹಭಾಗಿತ್ವದಲ್ಲಿ 2018ರಲ್ಲಿ ಎಸ್​ಎಸ್​ಕೆ ಕಂಪನಿ ಸ್ಥಾಪನೆಯಾಯಿತು. ಈ ಕಂಪನಿಯಲ್ಲಿ ನನ್ನ ಪಾಲು 70 ಪ್ರತಿಶತ ಹಾಗೂ ಮನೀಷ್​ 30 ಪ್ರತಿಶತ ಪಾಲನ್ನು ಹೊಂದಿದ್ದರು.

ಪಂಜಾಬ್​ ನ್ಯಾಷನಲ್​ ಬ್ಯಾಂಕಿನಲ್ಲಿ ನನ್ನ ಹಾಗೂ ರಾಜ್​ ಕುಂದ್ರಾರ ಜಾಯಿಂಟ್​ ಅಕೌಂಟ್ ಇದೆ. ಇದೇ ಖಾತೆ ಮೂಲಕ ರಾಜ್​ ಗೃಹ ಸಾಲ ಪಡೆದಿದ್ದಾರೆ. ನನ್ನ ಇತರೆ ಬ್ಯಾಂಕ್​ ಖಾತೆಗಳಿಂದ ಈ ಖಾತೆಗೆ ಗೃಹ ಸಾಲ ತೀರಿಸುವ ಸಲುವಾಗಿ ಹಣ ವರ್ಗಾವಣೆ ಮಾಡಿದ್ದೆ ಎಂದು ಶಿಲ್ಪಾ ಹೇಳಿದ್ದಾರೆ.

ನನಗೆ ಈ ಓಟಿಟಿ ಬಗ್ಗೆ ನಿಜಕ್ಕೂ ಯಾವುದೇ ಮಾಹಿತಿ ಇರಲಿಲ್ಲ. ನಾನು ನನ್ನದೇ ಕೆಲಸಗಳಲ್ಲಿ ನಿರತಳಾಗಿದ್ದರಿಂದ ರಾಜ್​ ಕುಂದ್ರಾ ಯಾವೆಲ್ಲ ವ್ಯವಹಾರಗಳನ್ನು ನಡೆಸುತ್ತಾರೆ ಅನ್ನೋದ್ರ ಬಗ್ಗೆ ಕಣ್ಣಿಟ್ಟಿರಲಿಲ್ಲ. ಅಲ್ಲದೇ ರಾಜ್​ ಕೂಡ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಚರ್ಚೆಗಳನ್ನು ನನ್ನ ಜೊತೆ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ನನಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಶಿಲ್ಪಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...