alex Certify ಪತ್ನಿಯನ್ನು ಜನ ಹೀಯಾಳಿಸುವುದನ್ನು ಸಹಿಸಲಾಗದೇ ಆಕೆಯನ್ನೇ ಕೊಂದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯನ್ನು ಜನ ಹೀಯಾಳಿಸುವುದನ್ನು ಸಹಿಸಲಾಗದೇ ಆಕೆಯನ್ನೇ ಕೊಂದ ಪತಿ

ಬೆಂಗಳೂರು: ಪತ್ನಿಯನ್ನು ಜನರು ಹೀಯಾಳಿಸುತ್ತಿರುವುದನ್ನು ಸಹಿಸಲಾಗದೇ ಆಕೆಯನ್ನೇ ಕೊಲೆಗೈದು ಬಳಿಕ ಪೊಲೀಸ್ ಠಾಣೆಗೆ ಬಂದು ಪತಿಮಹಾಶಯ ಶರಣಾಗಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ತಾರಾನಾಥ್ ಪತ್ನಿಯನ್ನೇ ಕೊಂದ ಆರೋಪಿ. ಮೂಲತ: ಮಂಗಳೂರಿನವನಾದ ತಾರಾನಾಥ್ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಪಾನಿಪುರಿ ಅಂಗಡಿ ನಡೆಸುತ್ತಿದ್ದ. ಆದರೆ ತಾರಾನಾಥ್ ಪತ್ನಿ ವಿರುದ್ಧ ಈ ಹಿಂದೆ ಮಂಗಳೂರಿನಲ್ಲಿ ಕಳ್ಳತನದ ಕೇಸ್ ದಾಖಲಾಗಿತ್ತು. ಹೀಗಾಗಿ ಜನರು ತಾರಾನಾಥ್ ಪತ್ನಿಯನ್ನು ಕಳ್ಳಿ ಕಳ್ಳಿ ಎಂದು ಹೀಯಾಳಿಸುತ್ತಿದ್ದರಂತೆ.

ಇದನ್ನು ಸಹಿಸಲಾಗದೇ ಹಗ್ಗದಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಧೈರ್ಯ ಸಾಲದೇ ನೇರವಾಗಿ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...