alex Certify ಲವ್ ಮ್ಯಾರೇಜ್ ಗೆ ವಿರೋಧ: ಗೃಹಸಚಿವರನ್ನು ಭೇಟಿಯಾಗಿ ರಕ್ಷಣೆ ಕೋರಿದ ತಮಿಳುನಾಡು ಮಂತ್ರಿ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್ ಮ್ಯಾರೇಜ್ ಗೆ ವಿರೋಧ: ಗೃಹಸಚಿವರನ್ನು ಭೇಟಿಯಾಗಿ ರಕ್ಷಣೆ ಕೋರಿದ ತಮಿಳುನಾಡು ಮಂತ್ರಿ ಮಗಳು

ಬೆಂಗಳೂರು: ಗೃಹಸಚಿವರನ್ನು ಭೇಟಿಯಾದ ತಮಿಳುನಾಡು ಸಚಿವರ ಪುತ್ರಿ ರಕ್ಷಣೆಗೆ ಮನವಿ ಮಾಡಿದ್ದಾರೆ. ಜಯಮಹಲ್ ನಲ್ಲಿರುವ ಗೃಹಸಚಿವರ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿರುವ ಜಯಕಲ್ಯಾಣಿ ರಕ್ಷಣೆಗಾಗಿ ಸಚಿವರಿಗೆ ಮನವಿ ಮಾಡಿದ್ದಾರೆ.

ತಮಿಳುನಾಡು ಮುಜರಾಯಿ ಖಾತೆ ಸಚಿವ ದಿವಾಕರ ಬಾಬು ಪುತ್ರಿ ಜಯಕಲ್ಯಾಣಿ ಹಗರಿಬೊಮ್ಮನಹಳ್ಳಿ ಮೂಲದ ಸತೀಶ್ ಜೊತೆಗೆ ಮದುವೆಯಾಗಿದ್ದರು.  ತಂದೆಯಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ.

ಗೃಹಸಚಿವರ ಜ್ಞಾನೇಂದ್ರ ಅವರು ರಕ್ಷಣೆ ನೀಡುವ ಭರವಸೆ ನೀಡಿದ್ದು, ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೊಂದಿಗೆ ಮಾತನಾಡಿದ್ದಾರೆ.

2021ರ ಸೆಪ್ಟಂಬರ್ ನಲ್ಲಿ ಚೆನ್ನೈನಿಂದ ಕಲ್ಯಾಣಿ ನಾಪತ್ತೆಯಾಗಿದ್ದರು. ಚೆನ್ನೈನಲ್ಲಿ ಜಯಕಲ್ಯಾಣಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಸತೀಶ್ ಮತ್ತು ಜಯ ಕಲ್ಯಾಣಿ ಅವರು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿದ್ದಾರೆ. ಪ್ರೀತಿಗೆ ತಂದೆ ವಿರೋಧದ ಹಿನ್ನೆಲೆಯಲ್ಲಿ ರಕ್ಷಣೆ ಕೊಡುವಂತೆ ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...