alex Certify ಸಿಎಂ ಸ್ಥಾನದಲ್ಲಿ ಬಿಎಸ್​ವೈ ಸೇಫ್​: ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಸ್ಥಾನದಲ್ಲಿ ಬಿಎಸ್​ವೈ ಸೇಫ್​: ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯದ ಹೊಗೆ ಕಳೆದ ಅನೇಕ ದಿನಗಳಿಂದ ಹರಿದಾಡುತ್ತಿದೆ. ಸಿಎಂ ಯಡಿಯೂರಪ್ಪ ವಿರುದ್ಧವೇ ಸಚಿವ ಸಿ.ಪಿ. ಯೋಗೀಶ್ವರ್​ ಬಹಿರಂಗವಾಗಿ ಅಸಮಾಧಾನದ ಹೇಳಿಕೆಗಳನ್ನ ನೀಡ್ತಿರೋದು ವಿರೋಧ ಪಕ್ಷಗಳು ಆಡಿಕೊಳ್ಳಲು ಮಾಡಿಕೊಟ್ಟ ವೇದಿಕೆಯಂತಾಗಿತ್ತು. ಅಲ್ಲದೇ ಸಿಎಂ ಸ್ಥಾನದಿಂದ ಬಿ.ಎಸ್.​ ಯಡಿಯೂರಪ್ಪ ಕೆಳಗೆ ಇಳೀತಾರೆ ಎಂಬ ಮಾತು ಕೂಡ ಕಳೆದ ಕೆಲದಿನಗಳಿಂದ ಹರಿದಾಡುತ್ತಿತ್ತು. ಆದರೆ ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿರುವ ಬಿಜೆಪಿ ಹೈಕಮಾಂಡ್​​ ಯಡಿಯೂರಪ್ಪ ಪರ ಬ್ಯಾಟ್​ ಬೀಸಿದೆ.

ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದ ಸಚಿವ ಯೋಗಿಶ್ವರ್​ ಸೇರಿದಂತೆ ಅನೇಕರಿಗೆ ಹೈಕಮಾಂಡ್​ ಖಡಕ್​ ವಾರ್ನಿಂಗ್​ ನೀಡಿದೆ. ಮಾತ್ರವಲ್ಲದೇ ಸಹಿ ಸಂಗ್ರಹಕ್ಕೆ ಮುಂದಾದವರಿಗೂ ಪಕ್ಷದ ವರಿಷ್ಠರು ಎಚ್ಚರಿಕೆಯ ಸಂದೇಶವನ್ನ ರವಾನಿಸಿದ್ದಾರೆ. ಹೈಕಮಾಂಡ್​ ಬಿ.ಎಸ್. ಯಡಿಯೂರಪ್ಪರ ಪರವಾಗಿದೆ.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಉಳಿದ ನಾಯಕರೂ ಸಹ ಏನೇ ಮಾತನಾಡುವುದಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತ್ರ ಮಾತನಾಡಿ. ಸಹಿ ಸಂಗ್ರಹದಂತಹ ಕಾರ್ಯಗಳನ್ನ ಮಾಡಿದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಖಡಕ್​ ಸಂದೇಶ ರವಾನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...