alex Certify ಪ್ರಯಾಗ್​ರಾಜ್​​ನಲ್ಲಿ ಭಾರೀ ಮಳೆ ಹಿನ್ನೆಲೆ ಶವಸಂಸ್ಕಾರ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಗ್​ರಾಜ್​​ನಲ್ಲಿ ಭಾರೀ ಮಳೆ ಹಿನ್ನೆಲೆ ಶವಸಂಸ್ಕಾರ ಸ್ಥಗಿತ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಂಗಾ ನದಿಯ ಫಾಫಾಮೌ ಘಾಟ್​ನಲ್ಲಿ ಶವಸಂಸ್ಕಾರವನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ನದಿಗಳಲ್ಲಿ ಶವ ತೇಲುವುದನ್ನ ತಡೆಯುವ ಸಲುವಾಗಿ ಪ್ರಯಾಗ್​ರಾಜ್​ ಆಡಳಿತ ಮಂಡಳಿ ಶವಗಳನ್ನ ದಡದಲ್ಲಿ ದಹನ ಮಾಡುವ ಕೆಲಸ ಮಾಡಿತ್ತು. ಕಳೆದ 24 ಗಂಟೆಗಳಲ್ಲಿ ಪುರಸಭೆ 150 ಶವಗಳ ಅಂತ್ಯಕ್ರಿಯೆ ಮಾಡಿದೆ. ಆದರೆ ಭಾರೀ ಮಳೆಯಿಂದಾಗಿ ಘಾಟ್​​ ಜಲಾವೃತವಾದ ಹಿನ್ನೆಲೆ ಶವಸಂಸ್ಕಾರವನ್ನ ನಿಲ್ಲಿಸಲಾಗಿದೆ.

ಫಾಫಾಮೌ ಘಾಟ್​ ಮುಳುಗುವ ವೇಳೆಯಲ್ಲಿಯೂ ಹಲವಾರು ಶವಗಳು ಹಾಗೂ ಕಟ್ಟಿಗೆಗಳು ನೀರಿನಲ್ಲಿ ತೇಲಿದ ದೃಶ್ಯಗಳು ಕಂಡುಬಂದಿದೆ.

ಕೋವಿಡ್​ನಿಂದ ಜನರ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಮೃತದೇಹಗಳನ್ನ ನಿರ್ವಹಣೆ ಮಾಡೋದೇ ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದಷ್ಟೇ ಗಂಗಾನದಿಯಲ್ಲಿ ಶವಗಳು ತೇಲುತ್ತಿರುವ ಸಾಕಷ್ಟು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು.

ಗಂಗಾನದಿಯಲ್ಲಿ ಶವಗಳು ತೇಲೋದನ್ನ ತಪ್ಪಿಸುವ ಸಲುವಾಗಿ ಇಲ್ಲಿನ ಪುರಸಭೆ ಎಲ್ಲಾ ಶವಗಳನ್ನ ಅಂತ್ಯಕ್ರಿಯೆ ಮಾಡುವ ನಿರ್ಧಾರಕ್ಕೆ ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...