alex Certify ಕುತಂತ್ರಕ್ಕೆ ಹೆದರಿ ಕ್ಷೇತ್ರ ಬಿಡಲ್ಲ, ನಾನು ಹುಟ್ಟಿರುವುದೇ ದೇವೇಗೌಡರ ಕುಟುಂಬದಲ್ಲಿ: ಚನ್ನಪಟ್ಟಣದಿಂದಲೇ ಸ್ಪರ್ಧೆ ಬಗ್ಗೆ HDK ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತಂತ್ರಕ್ಕೆ ಹೆದರಿ ಕ್ಷೇತ್ರ ಬಿಡಲ್ಲ, ನಾನು ಹುಟ್ಟಿರುವುದೇ ದೇವೇಗೌಡರ ಕುಟುಂಬದಲ್ಲಿ: ಚನ್ನಪಟ್ಟಣದಿಂದಲೇ ಸ್ಪರ್ಧೆ ಬಗ್ಗೆ HDK ಘೋಷಣೆ

ರಾಮನಗರ: ಮುಂದಿನ ಬಾರಿಯೂ ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕುತಂತ್ರ ರಾಜಕಾರಣಕ್ಕೆ ಕ್ಷೇತ್ರ ಬಿಡುತ್ತೇನೆ ಎಂದು ಕೆಲವರು ಅಂದುಕೊಂಡಿದ್ದಾರೆ. ನಾನು ಹುಟ್ಟಿ ಬಂದಿರುವುದು ಹೆಚ್.ಡಿ. ದೇವೇಗೌಡರ ಕುಟುಂಬದಲ್ಲಿ. ಹೋರಾಟ ಮಾಡುವ ಕಿಚ್ಚನ್ನು ನಮ್ಮ ತಂದೆ ಚೆನ್ನಾಗಿ ಕಲಿಸಿದ್ದಾರೆ ಎಂದರು.

ಸಹಕಾರ ಇಲಾಖೆಯಲ್ಲಿ ಅವರು ಮಾಡಿದ್ದೇ ಕಾನೂನು ಆಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನಿಮಗೆ ಅಧಿಕಾರ ಶಾಶ್ವತವಾ? ಯಾವುದೋ ರೀತಿಯಲ್ಲಿ ಬೊಮ್ಮಾಯಿಗೆ ಅಧಿಕಾರ ಸಿಕ್ಕಿದೆ. ಅಧಿಕಾರದಲ್ಲಿದ್ದಾಗ ಒಳ್ಳೆಯ ಹೆಸರು ತೆಗೆದುಕೊಳ್ಳಿ. ಯಾವಾಗ ತೊಲುಗುತ್ತಾರೋ ಎಂದು ಜನ ಮಾತನಾಡುತ್ತಿದ್ದಾರೆ. ಧಮ್ ತಾಕತ್ ಎಂದು ಮುಖ್ಯಮಂತ್ರಿ ಭಾಷಣ ಮಾಡುತ್ತಾರೆ. ಯಾರಿಗೋಸ್ಕರ ಧಮ್ ತಾಕತ್ ಪ್ರದರ್ಶಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...