alex Certify ರಾಜ್ಯದಲ್ಲಿ ಒರಿಜಿನಲ್ ಕಾಂಗ್ರೆಸ್, ಬಿಜೆಪಿ ಇಲ್ಲ; ಇಲ್ಲಿರುವುದು ಜನತಾ ಪರಿವಾರ; ಯಾರಿಗೂ ಪಕ್ಷ ನಿಷ್ಠೆ ಇಲ್ಲ; ಸಿದ್ಧರಾಮಯ್ಯರಿಗೆ HDK ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಒರಿಜಿನಲ್ ಕಾಂಗ್ರೆಸ್, ಬಿಜೆಪಿ ಇಲ್ಲ; ಇಲ್ಲಿರುವುದು ಜನತಾ ಪರಿವಾರ; ಯಾರಿಗೂ ಪಕ್ಷ ನಿಷ್ಠೆ ಇಲ್ಲ; ಸಿದ್ಧರಾಮಯ್ಯರಿಗೆ HDK ಟಾಂಗ್

ಬೆಳಗಾವಿ: ರಾಜ್ಯದಲ್ಲಿ ಒರಿಜಿನಲ್ ಕಾಂಗ್ರೆಸ್, ಒರಿಜಿನಲ್ ಬಿಜೆಪಿ ಇಲ್ಲ. ಇಲ್ಲಿರುವಂತಹುದು ಜನತಾಪರಿವಾರದ ಕಾಂಗ್ರೆಸ್ ಮತ್ತು ಬಿಜೆಪಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮುಖ್ಯಮಂತ್ರಿ ಜನತಾ ಪರಿವಾರದವರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಜನತಾ ಪರಿವಾರದವರು. ರಾಜ್ಯದಲ್ಲಿ ಮೂಲ ಕಾಂಗ್ರೆಸ್, ಮೂಲ ಬಿಜೆಪಿ ಯಾವಾಗೋ ಹೋಯ್ತು. ಇಲ್ಲಿ ಜನತಾಪರಿವಾರದ ಬಿಜೆಪಿ ಹಾಗೂ ಕಾಂಗ್ರೆಸ್ ಇದೆ. ಅವರಿಗೆ ಕೃತಜ್ಞತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಇವತ್ತು ರಾಜ್ಯದಲ್ಲಿ ಯಾರಿಗೂ ಕೃತಜ್ಞತೆ ಅನ್ನುವುದಾಗಲೀ ಇಲ್ಲ. ನಾವು ಒಂದು ಪಕ್ಷದಿಂದ ಬೆಳೆದಿದ್ದೇವೆ ಎನ್ನುವುದಾಗಲೀ, ನಾವು ಬೆಳೆದು ಪಕ್ಷಕ್ಕೆ ಅನ್ಯಾಯ ಆಗಬಾರದೆಂಬುದಾಗಲಿ ಇಲ್ಲ. ಹಿಂದೆ ಇದ್ದಂತಹ ಪಕ್ಷನಿಷ್ಠೆ ಈಗ ಯಾವ ಪಕ್ಷದಲ್ಲಿಯೂ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...