alex Certify ‘ಆಕಾಶದ ಗುಡ್ಡಕ್ಕಲೇ ಶಿಶುತಲೆ ಏರಿತಲೆ ಪರಾಕ್”: ಗೊರವಪ್ಪ ಕಾರಣಿಕ; ರೈತರು, ಯುವ ರಾಜಕಾರಣಿಗಳಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಕಾಶದ ಗುಡ್ಡಕ್ಕಲೇ ಶಿಶುತಲೆ ಏರಿತಲೆ ಪರಾಕ್”: ಗೊರವಪ್ಪ ಕಾರಣಿಕ; ರೈತರು, ಯುವ ರಾಜಕಾರಣಿಗಳಿಗೆ ಗುಡ್ ನ್ಯೂಸ್

ಹಾವೇರಿ: ‘ಆಕಾಶದ ಗುಡ್ಡಕ್ಕಲೇ ಶಿಶುತಲೆ ಏರಿತಲೆ ಪರಾಕ್’ ಎಂದು ದೇವರ ಗುಡ್ಡದಲ್ಲಿ ಗೊರವಪ್ಪ ನಾಗಪ್ಪ ಉರ್ಮಿ ಕಾರಣಿಕ ನುಡಿದಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ದಸರಾ ವೇಳೆ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವ ಇದಾಗಿದ್ದು, ದೇವರ ಗುಡ್ಡದಲ್ಲಿ ಬಿಲ್ಲನ್ನೇರಿ ಗೊರವಪ್ಪ ಕಾರ್ಣಿಕ ನುಡಿದಿದ್ದಾರೆ.

ಸಣ್ಣ ಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂಬರ್ಥದಲ್ಲಿ ದೇಗುಲದ ಪ್ರಧಾನ ಅರ್ಚಕ ಮಾಲತೇಶ ಭಟ್ ಅವರು ಆಕಾಶದ ಗುಡ್ಡಕ್ಕಲೆ ಶಿಶು ತಲೆ ಏರಿ ತಲೆ ಪರಾಕ್ ಕಾರಣಿಕ ವಿಶ್ಲೇಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...