alex Certify ಆಡಿದ ಮಾತು ತಂದ ಆಪತ್ತು: ನಾದಬ್ರಹ್ಮ ಹಂಸಲೇಖಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಡಿದ ಮಾತು ತಂದ ಆಪತ್ತು: ನಾದಬ್ರಹ್ಮ ಹಂಸಲೇಖಗೆ ಬಿಗ್ ಶಾಕ್

ಬೆಂಗಳೂರು: ಪೇಜಾವರ ಸ್ವಾಮೀಜಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಂಸಲೇಖ ಕ್ಷಮೆ ಕೇಳಿದ ನಂತರವೂ ಆಕ್ರೋಶ ಮುಂದುವರೆದಿದೆ. ಬೆಂಗಳೂರಿನ ಶ್ರೀನಗರ ನಿವಾಸಿ ಕೃಷ್ಣರಾಜ ಅವರು ಹನುಮಂತನಗರ ಠಾಣೆಗೆ ಹಂಸಲೇಖ ವಿರುದ್ಧ ದೂರು ನೀಡಿದ್ದಾರೆ. ಪೇಜಾವರ ಶ್ರೀಗಳು ಸಾಮಾಜಿಕ ಸಾಮರಸ್ಯಕ್ಕಾಗಿ ಕೈಗೊಂಡ ಕಾರ್ಯವನ್ನು ಲೇವಡಿಯಾಗಿ ಮಾತನಾಡಿ, ನನ್ನ ನಂಬಿಕೆಗೆ ಘಾಸಿಗೊಳಿಸಿದ್ದಾರೆ. ಬಿಳಿಗಿರಿರಂಗನಾಥಸ್ವಾಮಿ ಜಾನಪದ ಕತೆ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಧಾರ್ಮಿಕ ನಂಬಿಕೆ ಮತ್ತು ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿದ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...