alex Certify ವ್ಯಾಪಾರಕ್ಕೆ ನಿರ್ಬಂಧ ಸರಿಯಲ್ಲ, ಮುಸ್ಲಿಂ ದೇಶಗಳು ಭಾರತೀಯರು ಬೇಡ ಅಂದ್ರೆ ಬಂದವರಿಗೆಲ್ಲ ಕೆಲಸ ಕೊಡ್ತಿರಾ..?; ಬಿಜೆಪಿ ಎಂಎಲ್ಸಿ ವಿಶ್ವನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಪಾರಕ್ಕೆ ನಿರ್ಬಂಧ ಸರಿಯಲ್ಲ, ಮುಸ್ಲಿಂ ದೇಶಗಳು ಭಾರತೀಯರು ಬೇಡ ಅಂದ್ರೆ ಬಂದವರಿಗೆಲ್ಲ ಕೆಲಸ ಕೊಡ್ತಿರಾ..?; ಬಿಜೆಪಿ ಎಂಎಲ್ಸಿ ವಿಶ್ವನಾಥ್

ಬೆಳಗಾವಿ: ಮುಸ್ಲಿಮರಿಗೆ ದೇಗುಲಗಳ ಸಮೀಪ, ಆವರಣದಲ್ಲಿ ವ್ಯಾಪಾರ ಮಾಡಲು ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಇದನ್ನು ಯಾರೂ ಒಪ್ಪುವುದಿಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಮಾತನಾಡಿದ ಅವರು, ಅದು ಅವರ ಬದುಕು, ವ್ಯಾಪಾರಿಗಳ ಬಂಡವಾಳ ಎಷ್ಟು ಇರುತ್ತದೆ. ವ್ಯಾಪಾರಸ್ಥನ ಬಂಡವಾಳ 500 ರೂ. ಕೂಡ ಇರುವುದಿಲ್ಲ. ನೀನು ಅವನ ಮೇಲೆ ಹೊಟ್ಟೆ ಮೇಲೆ ಹೊಡೆದರೆ ಅವನು ಏನು ತಿನ್ನಬೇಕು ಎಂದು ಪ್ರಶ್ನಿಸಿದ್ದಾರೆ.

ಹೊಟ್ಟೆ ಮುಖ್ಯ, ನಿನ್ನ ಜಾತಿ, ಧರ್ಮ, ನಿನ್ನ ಪಕ್ಷ ಆಮೇಲೆ. ಮುಸ್ಲಿಮರಾದರೂ ಅವರು ಈ ದೇಶದ ಪ್ರಜೆಗಳು ಅಲ್ಲವಾ? ನಾವು ಯೋಚನೆ ಮಾಡದೆ ಏನೇನು ತೀರ್ಮಾನಗಳು ಆಗುತ್ತಿವೆ. ಮುಸ್ಲಿಂ ರಾಷ್ಟ್ರಗಳು ಭಾರತೀಯರು ಬೇಡ ಎಂದರೆ ಹೇಗಿರುತ್ತದೆ? ಬಂದವರಿಗೆಲ್ಲ ನಿಮಗೆ ಕೆಲಸ ಕೊಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...