alex Certify ರಾಷ್ಟ್ರಪತಿಯಿಂದ ವೀರ ಚಕ್ರ ಪ್ರಶಸ್ತಿ ಸ್ವೀಕರಿಸಿದ ಭಾರತದ ಹೆಮ್ಮೆಯ ಪುತ್ರ ಅಭಿನಂದನ್​ ವರ್ಧಮಾನ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಪತಿಯಿಂದ ವೀರ ಚಕ್ರ ಪ್ರಶಸ್ತಿ ಸ್ವೀಕರಿಸಿದ ಭಾರತದ ಹೆಮ್ಮೆಯ ಪುತ್ರ ಅಭಿನಂದನ್​ ವರ್ಧಮಾನ್…​..!

ಫೆಬ್ರವರಿ 2019ರಲ್ಲಿ ನಡೆದ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್​ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಗ್ರೂಪ್​ ಕ್ಯಾಪ್ಟನ್​​ ಅಭಿನಂದನ್​ ವರ್ಧಮಾನ್​ರಿಗೆ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್​ ವೀರ ಚಕ್ರವನ್ನು ನೀಡಿ ಗೌರವಿಸಿದ್ದಾರೆ. ಅಭಿನಂದನ್ ಎಫ್​ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಏಕೈಕ ಮಿಗ್​ 21 ಪೈಲಟ್​ ಆಗಿದ್ದಾರೆ.

2019ರ ಫೆಬ್ರವರಿ 26ರಂದು ಬಾಲಾಕೋಟ್​​ನಲ್ಲಿ ವೈಮಾನಿಕ ದಾಳಿ ನಡೆದಿತ್ತಿ. ಈ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಅಭಿನಂದನ್​ ಪಾಕಿಸ್ತಾನದ ಎಫ್​ 16ನ್ನು ಹೊಡೆದುರುಳಿಸಿದ್ದರು. ಆದರೆ ಅಭಿನಂದನ್​ ಅವರಿದ್ದ ಮಿಗ್​ 21 ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯಲ್ಲಿ ಹೊಡೆದುರುಳಿಸಿದ ಪರಿಣಾಮ ಅವರನ್ನು ಪಾಕ್​ ಸೇನೆಯು ವಶಪಡಿಸಿಕೊಂಡಿತ್ತು.

ಆಗ ವಿಂಗ್​ ಕಮಾಂಡರ್​ ಆಗಿದ್ದ ಅಭಿನಂದನ್​ ಪಾಕಿಸ್ತಾನದ ವಶದಲ್ಲಿದ್ದ ವೇಳೆ ಪಾಕಿಸ್ತಾನವು ಸಾಕಷ್ಟು ವಿಡಿಯೋಗಳನ್ನು ಹರಿಬಿಟ್ಟಿತ್ತು. ರಕ್ತ ಸಿಕ್ತ ಸ್ಥಿತಿಯಲ್ಲಿದ್ದ ಅಭಿನಂದನ್​ ವರ್ಧಮಾನ್​ ಎಷ್ಟೇ ಒತ್ತಡ ಹಾಕಿದರೂ ಸಹ ಭಾರತದ ಕಾರ್ಯಾಚರಣೆಗಳ ಬಗ್ಗೆ ಕೂದಲೆಳೆಯ ಮಾಹಿತಿಯನ್ನೂ ಬಿಟ್ಟು ಕೊಡದೇ ದೇಶ ಪ್ರೇಮ ಮೆರೆದಿದ್ದರು. ಅಭಿನಂದನ್​​ರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ ಭಾರತ ಪಾಕ್​ನ ಮೇಲೆ ಜಾಗತಿಕವಾಗಿ ಒತ್ತಡ ಹೇರುವ ಮೂಲಕ ಅಭಿನಂದನ್​​ರನ್ನು ತಾಯ್ನಾಡಿಗೆ ವಾಪಸ್​ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದಾದ ಬಳಿಕ ಅವರಿಗೆ ಗ್ರೂಪ್​ ಕ್ಯಾಪ್ಟನ್​ ಆಗಿ ಬಡ್ತಿ ನೀಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...