alex Certify ‘ಯುವನಿಧಿ’ ಯೋಜನೆಗಾಗಿ ರಾಜ್ಯ ಸರ್ಕಾರ ಹೆಚ್ಚು ‘ಮದ್ಯ’ ಮಾರಾಟ ಮಾಡುತ್ತಿದೆ : ಬಿಜೆಪಿ ವಾಗ್ಧಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಯುವನಿಧಿ’ ಯೋಜನೆಗಾಗಿ ರಾಜ್ಯ ಸರ್ಕಾರ ಹೆಚ್ಚು ‘ಮದ್ಯ’ ಮಾರಾಟ ಮಾಡುತ್ತಿದೆ : ಬಿಜೆಪಿ ವಾಗ್ಧಾಳಿ

ಬೆಂಗಳೂರು : 5 ನೇ ಗ್ಯಾರಂಟಿ ಯೋಜನೆಗೆ ಸರ್ಕಾರ ಪರದಾಡುತ್ತಿದೆ. ಯುವನಿಧಿಗಾಗಿ ಹೆಚ್ಚು ‘ಮದ್ಯ’ ಮಾರಾಟ ಮಾಡುತ್ತಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.

ಕರ್ನಾಟಕದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೆ , ರಾಜ್ಯದ ಬೊಕ್ಕಸವನ್ನು ಈಗಲೇ ಬರಿದು ಮಾಡಿದ್ದರ ಫಲವಾಗಿ ತಾನೇ ಹೇಳಿದ ಗ್ಯಾರಂಟಿ ಜಾರಿಗೆ ಹಣವಿಲ್ಲದಾಗಿದೆ. ನಿರುದ್ಯೋಗಿ ಯುವ ಜನತೆಗೆ ಹಣ ನೀಡಲು ಸರ್ಕಾರ ಮದ್ಯ ಮಾರಾಟ ಹೆಚ್ಚಳದ ಮೊರೆ ಹೋಗಿರುವುದು ಕಳವಳಕಾರಿ. ₹7,000 ಕೋಟಿಯಷ್ಟು ಹೆಚ್ಚುವರಿ ಮದ್ಯವನ್ನು ರಾಜ್ಯದ ಜನತೆಗೆ ಕುಡಿಸಿ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಸರ್ಕಾರ ಗುರಿ ಇಟ್ಟಿರುವುದು ದುರಂತ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...