alex Certify ಹದಗೆಟ್ಟ ಆರೋಗ್ಯದಿಂದ ಹತಾಶೆಗೊಂಡು ಪತ್ನಿಯನ್ನು ಇರಿದು ಕೊಂದ ವೃದ್ಧ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹದಗೆಟ್ಟ ಆರೋಗ್ಯದಿಂದ ಹತಾಶೆಗೊಂಡು ಪತ್ನಿಯನ್ನು ಇರಿದು ಕೊಂದ ವೃದ್ಧ ಪತಿ

ಮುಂಬೈ: ಹದಗೆಟ್ಟ ಆರೋಗ್ಯದಿಂದ ಕಂಗೆಟ್ಟಿದ್ದ ವೃದ್ಧನೊಬ್ಬ ತನ್ನ 67 ವರ್ಷದ ಪತ್ನಿಯನ್ನು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈ ಮಹಾನಗರದ ಪೊವಾಯಿ ಪ್ರದೇಶದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕೊಂಡಾಬಾಯಿ ತ್ರಿಮುಖೆ ಎಂದು ಗುರುತಿಸಲಾಗಿದೆ. ಶಂಕರ್, ಪತ್ನಿಯನ್ನು ಹತ್ಯೆಗೈದ ಪತಿ. ಈತ ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿದ್ದ. ಇದರಿಂದ ತೀವ್ರ ಹತಾಶೆ ಅನುಭವಿಸಿದ್ದ ಶಂಕರ್ ತನ್ನ ಪತ್ನಿ ಮಲಗಿದ್ದ ವೇಳೆ ಆಕೆಯ ಎದೆ, ಸೊಂಟ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.

ಏರ್ಟೆಲ್ ಶುರು ಮಾಡಿದೆ ಬಂಪರ್ ಸೇವೆ…..! ಗ್ರಾಹಕರಿಗೆ ಸಿಗ್ತಿದೆ 30 ದಿನ ಉಚಿತ ಸೌಲಭ್ಯ

ಈ ವೇಳೆ ತ್ರಿಮುಖೆಯ ಬೊಬ್ಬೆ ಕೇಳಿದ ಸೊಸೆ ಎಚ್ಚರಗೊಂಡ ನೋಡಿದಾಗ ಒಂದು ಕ್ಷಣ ಶಾಕ್ ಆಗಿದ್ದಾಳೆ. ಕೂಡಲೇ ನೆರೆಹೊರೆಯವರ ಸಹಾಯದಿಂದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ವೃದ್ಧೆ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಇನ್ನು ಆರೋಪಿ ಪತಿ ಶಂಕರ್ ನನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...