alex Certify ಆಧಾರ್ ಕಾರ್ಡ್ ಇದ್ರೆ ಜನಧನ್ ಯೋಜನೆಯಡಿ ಸಾಲ: ಯೋಜನೆ ಹೆಸರಲ್ಲಿ ವಂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಇದ್ರೆ ಜನಧನ್ ಯೋಜನೆಯಡಿ ಸಾಲ: ಯೋಜನೆ ಹೆಸರಲ್ಲಿ ವಂಚನೆ

ಬೆಂಗಳೂರು: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಹೆಸರಲ್ಲಿ ಮಹಿಳೆಯನ್ನು ವಂಚಿಸಿದ ಘಟನೆ ನಡೆದಿದ್ದು, ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀನಗರ ನಿವಾಸಿ ಸುಶೀಲಾ ಎಂಬವರಿಗೆ ನೀವು ಜನಧನ್ ಯೋಜನೆಯಡಿ ಸಾಲಕ್ಕೆ ಅರ್ಹತೆ ಪಡೆದುಕೊಂಡಿದ್ದೀರಿ ಎಂದು ನಂಬಿಸಿದ್ದ ಅಪರಿಚಿತ ವ್ಯಕ್ತಿ 1.52 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಆಧಾರ್ ಕಾರ್ಡ್ ಗೆ ಸಬ್ಸಿಡಿ ಸಾಲ ಪಡೆಯಬಹುದು ಎನ್ನುವ ಸಂದೇಶ ಬಂದಿದ್ದು, ಈ ನಂಬರ್ ಗೆ ಕರೆ ಮಾಡಿದಾಗ ಜನಧನ್ ಯೋಜನೆ ಸಾಲ ಪಡೆಯಲು ನೀವು ಅರ್ಹತೆ ಪಡೆದುಕೊಂಡಿದ್ದೀರಿ. ಇದಕ್ಕಾಗಿ ಶುಲ್ಕ ಪಾವತಿಸಬೇಕಿದೆ ಎಂದು ಹಂತ ಹಂತವಾಗಿ 1.52 ಲಕ್ಷ ರೂ. ಹಣವನ್ನು ಸುಶೀಲಾ ವರ್ಗಾವಣೆ ಮಾಡಿದ್ದಾರೆ. ಇದಾದ ನಂತರ ಆರೋಪಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದ್ದು, ವಂಚನೆಗೊಳಗಾದ ಸುಶೀಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...