alex Certify 20 ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ…..!

20 ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಬುಲಂದರ್​ಶಹರ್​ ಜಿಲ್ಲೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಿಚಿತ್ರ ಘಟನೆಯು ಕಳೆದ ವಾರ ಸಂಭವಿಸಿತ್ತು. ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಐದನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳನ್ನ ಪಂಕಜ್​, ಅಮಿತ್​, ರಿಕ್ಕಿ ಹಾಗೂ ಅಭಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗೌತಮ ಬುದ್ಧ ನಗರ ಜಿಲ್ಲೆಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಪ್ರಕರಣ ಸಂಬಂಧ ಮಾತನಾಡಿದ ಹಿರಿಯ ಸೂಪರಿಟೆಂಡೆಂಟ್​​ ಸಂತೋಷ್​ ಕುಮಾರ್​ ಸಿಂಗ್​, ಐವರು ಆರೋಪಿಗಳು ಕೋಟ್ವಾಲಿ ಪೊಲೀಸ್​ ಠಾಣೆ ವ್ಯಾಪ್ತಿಯ ದರಿಯಾಪುರ ಗ್ರಾಮದಲ್ಲಿರುವ ಮೃತ ವ್ಯಕ್ತಿಯ ಅಂಗಡಿಗೆ ಜುಲೈ 22ರ ಬೆಳಗ್ಗೆ 8:40 ಸುಮಾರಿಗೆ ಭೇಟಿ ನೀಡಿದ್ದರು. ಅಂಗಡಿಯಲ್ಲಿ ಸಿಗರೇಟ್​ ಖರೀದಿ ಮಾಡಿದ್ದ ಆರೋಪಿಗಳು 20 ರೂಪಾಯಿ ವಿಚಾರಕ್ಕೆ ಜಗಳ ಆರಂಭಿಸಿದ್ದರು.

ಬಿಎಸ್​​ಎಫ್​ನಲ್ಲಿ ಕೆಲಸ ಮಾಡುವ ನಿಸಾರ್​​ ಪುತ್ರ ಅಫ್ಸರ್​​​ ಇವರ ಮೇಲೆ ಕೈ ಮಾಡಿದ್ದ. ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದ ಆರೋಪಿಗಳು ಮತ್ತಿಷ್ಟು ಜನರನ್ನ ಸೇರಿಸಿಕೊಂಡು ಅಂಗಡಿಗೆ ಮರಳಿದ್ದರು. ನಿಸಾರ್​ರ ಅಂಗಡಿಯನ್ನು ಧ್ವಂಸ ಮಾಡಿದ್ದರು ಮಾತ್ರವಲ್ಲದೇ ಅಫ್ಸರ್​ ಹಾಗೂ ನಿಸಾರ್​ ಮೇಲೆ ಫೈರಿಂಗ್​ ನಡೆಸಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಸಾರ್​ ದೆಹಲಿಯ ಏಮ್ಸ್​ನಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...