alex Certify ಫಿಟ್ ನೆಸ್ ಬಗ್ಗೆ ಮಾತನಾಡುತ್ತಾ ಗ್ರೀನ್ ಟೀ ಮಹತ್ವ ತಿಳಿಸಿದ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ ನೆಸ್ ಬಗ್ಗೆ ಮಾತನಾಡುತ್ತಾ ಗ್ರೀನ್ ಟೀ ಮಹತ್ವ ತಿಳಿಸಿದ ಸಿದ್ದರಾಮಯ್ಯ

ವಿಜಯಪುರ: ಉಪಚುನಾವಣಾ ಅಖಾಡದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಜಿಮ್ ನಲ್ಲಿ ವರ್ಕೌಟ್ ಮಾಡಿ ಗಮನ ಸೆಳೆದಿದ್ದರು. ಇಂದು ಗ್ರೀನ್ ಟೀ ಸೇವಿಸುತ್ತಾ ಫಿಟ್ ನೆಸ್ ಬಗ್ಗೆ ಮಾತನಾಡಿದ್ದಾರೆ.

ಸಿಂದಗಿ ಚುನಾವಣಾ ಪ್ರಚಾರದ ನಡುವೆ ಗ್ರೀನ್ ಟೀ ಸೇವಿಸುತ್ತಾ ಫಿಟ್ ನೆಸ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಯಾವಾಗಲೂ ಫಿಟ್ ಆಗಿ ಇರುತ್ತೇನೆ. ಫಿಟ್ ನೆಸ್ ಹೋದರೆ ರಾಜಕೀಯವನ್ನು ಬಿಡುತ್ತೇನೆ. ಓಡಾಟಕ್ಕೆ ಆಗದಿದ್ದಾಗ ನಮಗೆ ರಾಜಕೀಯ ಯಾಕೆ ಬೇಕು? ಹಾಗಾಗಿ ಫಿಟ್ ನೆಸ್ ಇರುವವರೆಗೆ ರಾಜಕೀಯದಲ್ಲಿರುತ್ತೇನೆ ಎಂದಿದ್ದಾರೆ.

ಕೆಲಸದ ಜೊತೆ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ 40 ಸಾವಿರ ಗಳಿಸಿ

ಮಧುಮೇಹವಿರುವುದರಿಂದ ನಾನು ಶುಗರ್ ಲೆಸ್ ಗ್ರೀನ್ ಟೀ ಕುಡಿಯುತ್ತೇನೆ. ನೋ ಮಿಲ್ಕ್, ನೋ ಶುಗರ್. ನಮ್ಮ ದೇಹದಲ್ಲಿ ಜಾಸ್ತಿ ಇರುವುದನ್ನು ಬಿಡಬೇಕು. ಕಡಿಮೆ ಇರುವುದನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ನನಗೆ ಯಾವಾಗಲೂ ಫಿಟ್ ಆಗಿರಬೇಕು. ಫಿಟ್ ಆಗಿರುವವರೆಗೂ ರಾಜಕೀಯದಲ್ಲಿರುತ್ತೇನೆ. ವಯಸ್ಸಾದ ಮೇಲೆ ನರಳಾಡುತ್ತಾ ರಾಜಕೀಯ ಮಾಡಬಾರದು ಎಂಬುದು ನನ್ನ ವಿಚಾರ. ಇದು ನನಗೆ ನಾನು ಹೇಳಿಕೊಳ್ಳುತ್ತಿರುವುದು. ಬೇರೆಯವರು ಅವರವರ ಇಷ್ಟಕ್ಕೆ ಬಿಟ್ಟದ್ದು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...