alex Certify ಜಿಂಕೆ ಕೊಂದು ಹೆಗಲ ಮೇಲೆ ಹೊತ್ತು ಸಾಗಿದ ಕಳ್ಳರು; ಓರ್ವನಿಗೆ ಗುಂಡೇಟು, ಮೂವರು ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆ ಕೊಂದು ಹೆಗಲ ಮೇಲೆ ಹೊತ್ತು ಸಾಗಿದ ಕಳ್ಳರು; ಓರ್ವನಿಗೆ ಗುಂಡೇಟು, ಮೂವರು ಪರಾರಿ

ಮಂಡ್ಯ: ಜಿಂಕೆ ಬೇಟೆಯಾಡಿ ಬಳಿಕ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ನಾಲ್ವರು ಕಳ್ಳರ ಮೇಲೆ ವನಪಾಲಕರು ಫೈರಿಂಗ್ ನಡೆಸಿದ್ದು, ಓರ್ವನಿಗೆ ಗುಂಡೇಟು ತಗುಲಿದ್ದು, ಮೂವರು ಪರಾರಿಯಾಗಿರುವ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ಬಸವನಬೆಟ್ಟದ ಬಳಿ ನಡೆದಿದೆ.

ಶಿಕಾರಿಗೆಂದು ಅರಣ್ಯಕ್ಕೆ ತೆರಳಿದ ಗುಂಪು ಬಂದೂಕಿನಿಂದ ಜಿಂಕೆಯನ್ನು ಕೊಂದಿದ್ದು, ಬಳಿಕ ಜಿಂಕೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದರು. ಗಸ್ತು ತಿರುಗುತ್ತಿದ್ದ ವನಪಾಲಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಪ್ಪಿಸಕೊಳ್ಳಲು ಮುಂದಾದ ನಾಲ್ವರ ಮೇಲೆ ವನಪಾಲಕರು ಫೈರಿಂಗ್ ನಡೆಸಿದ್ದಾರೆ.

ಈ ವೇಳೆ ವೆಂಕಟೇಶ್ ಎಂಬ ಓರ್ವನಿಗೆ ಗುಂಡೇಟು ತಗುಲಿದೆ. ಉಳಿದ ಮೂವರು ಪರಾರಿಯಾಗಿದ್ದಾರೆ. ವೆಂಕಟೇಶ್ ನನ್ನು ವಶಕ್ಕೆ ಪಡೆದ ವನಪಾಲಕರು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...