alex Certify GOOD NEWS: ವಾರದೊಳಗೆ ಖಾದ್ಯ ತೈಲ ಬೆಲೆ ಲೀಟರ್‌ಗೆ ಹತ್ತು ರೂ. ಇಳಿಸಲು ಸರ್ಕಾರದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ವಾರದೊಳಗೆ ಖಾದ್ಯ ತೈಲ ಬೆಲೆ ಲೀಟರ್‌ಗೆ ಹತ್ತು ರೂ. ಇಳಿಸಲು ಸರ್ಕಾರದ ಸೂಚನೆ

ಜನ ಸಾಮಾನ್ಯರಿಗೆ ಇದೊಂದು ಗುಡ್​ ನ್ಯೂಸ್​. ಒಂದು ವಾರದೊಳಗೆ ಖಾದ್ಯ ತೈಲಗಳ ಎಂಆರ್​ಪಿಯನ್ನು ಲೀಟರ್​ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಆಹಾರ ಸಚಿವಾಲಯ ಬುಧವಾರ ತೈಲ ಉತ್ಪಾದನಾ ಕಂಪನಿಗಳಿಗೆ ಸೂಚಿಸಿದೆ.

ಜಾಗತಿಕ ಬೆಲೆಗಳ ಕುಸಿತದ ನಡುವೆ ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಯಲ್ಲಿ ಇಳಿಕೆಯ ಬಗ್ಗೆ ತಯಾರಕರೊಂದಿಗೆ ಚರ್ಚಿಸಲು ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆಯವರು ಸಭೆ ನಡೆಸಿದರು. ನಂತರ ಈ ಘೋಷಣೆ ಮಾಡಿದ್ದಾರೆ.

ಜಾಗತಿಕ ಬೆಲೆಗಳಲ್ಲಿನ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ನಾವು ಉತ್ಪಾದಕರಿಗೆ ಸೂಚಿಸುತ್ತಿದ್ದೇವೆ ಎಂದು ಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಈ ಹಕ್ಕಿಗಳಿಂದ ಮಾನವರು ಕಲಿಯಬೇಕಾದದ್ದು ಸಾಕಷ್ಟಿದೆ..! ನೆಟ್ಟಿಗರ ಮನಗೆದ್ದಿದೆ ಈ ಹೃದಯಸ್ಪರ್ಶಿ ವಿಡಿಯೋ

ಕಳೆದ ತಿಂಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಅಂತರಾಷ್ಟ್ರೀಯ ದರಗಳ ಕಡಿಮೆಯಾಗುತ್ತಿದ್ದಂತೆ ಸರ್ಕಾರ ಮಧ್ಯ ಪ್ರವೇಶ ಮಾಡಿತ್ತು. ಅನೇಕ ಖಾದ್ಯ ತೈಲ ಸಂಸ್ಥೆಗಳು ತಮ್ಮ ಬೆಲೆಯನ್ನು ಲೀಟರ್​ಗೆ 10-15 ರೂ. ಕಡಿಮೆ ಮಾಡಿದ್ದವು.

ಭಾರತವು ಅಗತ್ಯ ಖಾದ್ಯ ತೈಲದ ಶೇಕಡಾ 60ಕ್ಕಿಂತ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ. 2020-21ರಲ್ಲಿ ಖಾದ್ಯ ತೈಲದ ಆಮದು 131.3 ಲಕ್ಷ ಟನ್​ಗಳಷ್ಟಿತ್ತು. ಬೆಲೆ ಏರಿಕೆ ಕೂಗು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಒಂದಷ್ಟು ಕ್ರಮಕೈಗೊಳ್ಳುತ್ತಿದ್ದು, ಇದೀಗ ಉತ್ಪಾದಕರನ್ನು ಕರೆದು ಮಾತನಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...