alex Certify ಮಾನವೀಯತೆಯ ಕಗ್ಗೊಲೆ: ಶ್ವಾನಗಳ ಬಾಯಿಗೆ ಆಸಿಡ್​ ಸುರಿದು ಕೊಲೆಗೈದ ಪಾಪಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆಯ ಕಗ್ಗೊಲೆ: ಶ್ವಾನಗಳ ಬಾಯಿಗೆ ಆಸಿಡ್​ ಸುರಿದು ಕೊಲೆಗೈದ ಪಾಪಿಗಳು..!

ಐದು ಬೀದಿನಾಯಿಗಳ ಮೇಲೆ ದುಷ್ಕರ್ಮಿಗಳು ಆಸಿಡ್​ ದಾಳಿ ನಡೆಸಿದ ಅಮಾನುಷ ಘಟನೆ ಮಧ್ಯ ಪ್ರದೇಶದಲ್ಲಿ ಉಜ್ಜಿಯಿನಿಯಲ್ಲಿ ನಡೆದಿದೆ. ಪ್ರಾಣಿ ಪ್ರೇಮಿಗಳಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಸಿಡ್​ ದಾಳಿಗೆ ಒಳಗಾಗಿದ್ದ ಬೀದಿ ನಾಯಿಗಳು ಪ್ರಾಣ ಬಿಟ್ಟಿವೆ ಎನ್ನಲಾಗಿದೆ.

ಇನ್ನೂ ಪತ್ತೆಯಾಗದ ಆರೋಪಿಗಳ ವಿರುದ್ಧ ಸೆಕ್ಷನ್​ 428 ಸೇರಿದಂತೆ ವಿವಿಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದೋರ್​ನ ಪ್ರಾಣಿ ದಯಾ ಸಂಘದ ಸಹಾಯವಾಣಿಗೆ ಬೀದಿ ನಾಯಿಗಳ ಮೇಲೆ ಆಸಿಡ್​ ದಾಳಿಯ ಬಗ್ಗೆ ಕರೆ ಬರುತ್ತಿದ್ದಂತೆಯೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಉಜ್ಜಯಿನಿಯ ನಾಗಜಿರಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಐದು ಬೀದಿ ನಾಯಿಗಳ ಬಾಯಿಗೆ ಯಾರೋ ಅಪರಿಚಿತರು ಆಸಿಡ್​ ಸುರಿದಿದ್ದಾರೆ ಎಂದು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಪೀಪಲ್​ ಫಾರ್​ ಆನಿಮಲ್ಸ್​​ನ ಇಂದೋರ್​ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್​ ಹೇಳಿದ್ರು.

ನಾಲ್ಕರಿಂದ ಎಂಟು ವರ್ಷದ ಪ್ರಾಯದ ಈ ಶ್ವಾನಗಳನ್ನು ಸ್ಥಳೀಯರು ಕೂಡಲೇ ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಶ್ವಾನಗಳು ಅಷ್ಟರಲ್ಲಾಗಲೇ ಸಾವನ್ನಪ್ಪಿವೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...