alex Certify ವಿಧಿಯಾಟ ಬಲ್ಲವರಾರು ? ಕೇರಳ ಮೂಲದ ಸ್ನೇಹಿತನ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಸ್ನೇಹಿತರು ನೇಪಾಳ ವಿಮಾನ ದುರಂತದಲ್ಲಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಿಯಾಟ ಬಲ್ಲವರಾರು ? ಕೇರಳ ಮೂಲದ ಸ್ನೇಹಿತನ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಸ್ನೇಹಿತರು ನೇಪಾಳ ವಿಮಾನ ದುರಂತದಲ್ಲಿ ಸಾವು

72 ಪ್ರಯಾಣಿಕರ ಜೊತೆ ನೇಪಾಳದ ಯೇತಿ ಏರ್ ಲೈನ್ಸ್ ನ ವಿಮಾನ ದುರಂತದಲ್ಲಿ ಮಡಿದವರ ಕಥೆಗಳು ಕಣ್ಣೀರು ತರಿಸುತ್ವೆ. ಕೇರಳದಲ್ಲಿ ಸ್ನೇಹಿತನ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಸ್ನೇಹಿತರು ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದು ಅವರ ಕುಟುಂಬ ಆಘಾತಕ್ಕೀಡಾಗಿದೆ.

ಭಾನುವಾರ ಪೋಖರಾ ನಗರದಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಪೈಕಿ ತಮ್ಮ ಮೂವರು ಸ್ನೇಹಿತರು ಇದ್ದಾರೆ ಎಂದು ತಿಳಿದು ಕೇರಳದ ಪಥನಂತಿಟ್ಟ ಜಿಲ್ಲೆಯ ಕುಟುಂಬವೂ ಆಘಾತಕ್ಕೊಳಗಾಗಿದೆ.

ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಮೂವರನ್ನು ರಾಜು, ರಾಬಿನ್ ಮತ್ತು ಅನಿಲ್ ಎಂದು ಗುರ್ತಿಸಲಾಗಿದೆ. ಇತರ ಇಬ್ಬರು ಸ್ನೇಹಿತರೊಂದಿಗೆ ಇವರು ತಮ್ಮ ಭಾರತೀಯ ಸಹೋದ್ಯೋಗಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಭಾನುವಾರ ಕೇರಳದಿಂದ ತೆರಳಿದ್ದರು.

ಪತ್ತನಂತಿಟ್ಟದ ಆನಿಕ್ಕಾಡು ನಿವಾಸಿ ಮ್ಯಾಥ್ಯೂ ಫಿಲಿಪ್ ಜನವರಿ 11 ರಂದು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾರತೀಯ ಮೂಲದ ಮೂವರು ಸ್ನೇಹಿತರು ಪಾಲ್ಗೊಂಡಿದ್ದರು.

ಜನವರಿ 13 ರಂದು ಫಿಲಿಪ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಾಜು, ರಾಬಿನ್ ಮತ್ತು ಅನಿಲ್ ಜೊತೆಗೆ ದೀಪಕ್ ಮತ್ತು ಸರಣ್ ಕೇರಳಕ್ಕೆ ಬಂದಿದ್ದರು.

ಭಾನುವಾರ ನಡೆದ ಮಾರಣಾಂತಿಕ ವಿಮಾನ ಅಪಘಾತದಲ್ಲಿ ರಾಜು, ರಾಬಿನ್ ಮತ್ತು ಅನಿಲ್ ಸಾವನ್ನಪ್ಪಿದ್ದರೆ, ದೀಪಕ್ ಮತ್ತು ಸರಣ್ ದುರದೃಷ್ಟಕರ ವಿಮಾನವನ್ನು ತಪ್ಪಿಸಿಕೊಂಡಿದ್ದರು.

AP

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...