alex Certify ಲಾಡ್ಜ್ ನಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಡ್ಜ್ ನಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಅರ್ಚನಾ(28) ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕಾಟನ್ ಪೇಟೆ ಲಾಡ್ಜ್ ನಲ್ಲಿ ಅರ್ಚನಾ ಮೇಲೆ ಹಲ್ಲೆ ನಡೆದಿತ್ತು. ಮತ್ತೊಬ್ಬ ಮಂಗಳಮುಖಿ ಸಂಜನಾ(30)ಗೆ ಚಿಕಿತ್ಸೆ ಮುಂದುವರೆದಿದೆ. ಕೊಲ್ಕತ್ತಾ ಮೂಲದ ಅಂಕಿತ್ ಕುಮಾರ್(28) ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಖಾಸಗಿ ಆಸ್ಪತ್ರೆ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಅಂಕಿತ್ ಕುಮಾರ್ ಶುಕ್ರವಾರ ತಡರಾತ್ರಿ ಮೆಜೆಸ್ಟಿಕ್ ಗೆ ಬಂದಿದ್ದ ಸಂದರ್ಭದಲ್ಲಿ ಮೂಡಲಪಾಳ್ಯದ ಅರ್ಚನಾ ಮತ್ತು ಸಂಜನಾ ಪರಿಚಯವಾಗಿ ಏಕಾಂತದಲ್ಲಿ ಕಾಲ ಕಳೆಯಲು ಲಾಡ್ಜ್ ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿದೆ.

ಸಂಜನಾ ಮತ್ತು ಅರ್ಚನಾ ಅವರೊಂದಿಗೆ ಹೊಡೆದಾಡಿಕೊಂಡು ಅಂಕಿಂತ್ ಕುಮಾರ್ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಸಂಜನಾ ಮತ್ತು ಅರ್ಚನಾ ಆತನ ತಲೆಗೆ ಅಲ್ಲೇ ಇದ್ದ ವಸ್ತುವಿನಿಂದ ಹೊಡೆದಿದ್ದಾರೆ. ಕೂಗಾಟ ಕೇಳಿ ಬಂದ ಲಾಡ್ಜ್ ಸಿಬ್ಬಂದಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...