alex Certify ಕುಟುಂಬದ ಸುಖ, ದುಃಖದಲ್ಲಿ ಭಾಗಿಯಾದ ಗ್ರಾಮಸ್ಥರು: ಅತ್ತ ತಂದೆ ಅಂತ್ಯಕ್ರಿಯೆ, ಇತ್ತ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದ ಸುಖ, ದುಃಖದಲ್ಲಿ ಭಾಗಿಯಾದ ಗ್ರಾಮಸ್ಥರು: ಅತ್ತ ತಂದೆ ಅಂತ್ಯಕ್ರಿಯೆ, ಇತ್ತ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮಸ್ಥರು ತಂದೆ ಮೃತಪಟ್ಟ ಮಾಹಿತಿ ಮುಚ್ಚಿಟ್ಟು ಪುತ್ರನ ಮದುವೆ ನೆರವೇರಿಸಿದ್ದಾರೆ.

ಅತ್ತ ತಂದೆ ಅಂತ್ಯಕ್ರಿಯೆ ನಡೆದರೆ ಇತ್ತ ಪುತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ಣಾ ಗ್ರಾಮದ ಪ್ರಭು ಕಂದಗುಳ ಅವರು ಮೃತಪಟ್ಟ ವ್ಯಕ್ತಿ. ಅವರ ಪುತ್ರ ವೀರೇಶ್ ಮದುವೆ ಗ್ರಾಮಸ್ಥರ ನೆರವಿನಿಂದ ಜರುಗಿದೆ.

ಬೀದರ್ ಯುವತಿಯೊಂದಿಗೆ ವೀರೇಶ್ ಮದುವೆ ಶುಕ್ರವಾರ ನಿಗದಿಯಾಗಿತ್ತು. ಗುರುವಾರ ರಾತ್ರಿ ಮದುಮಗನನ್ನು ಬೀದರ್ ಗೆ ಕರೆದುಕೊಂಡು ಹೋಗಲಾಗಿತ್ತು. ಅವರ ತಂದೆ ಹಾಗೂ ಕೆಲವು ಸಂಬಂಧಿಕರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಮದುವೆಗೆ ಹೊರಡಲು ಸಂಬಂಧಿಕರು ಸಿದ್ಧವಾಗುತ್ತಿದ್ದ ವೇಳೆಯಲ್ಲೇ ಪ್ರಭು ಮೃತಪಟ್ಟಿರುವುದು ಗೊತ್ತಾಗಿದೆ.

ಮದುವೆ ಸಂಭ್ರಮಕ್ಕೆ ಸಾವಿನ ವಿಷಯ ಅಡ್ಡಿಯಾಗದಂತೆ ಗ್ರಾಮಸ್ಥರು ನೋಡಿಕೊಂಡಿದ್ದು, ಎಲ್ಲರೂ ಸೇರಿ ಪ್ರಭು ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ದುಃಖದಿಂದಲೇ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಅಂತ್ಯಕ್ರಿಯೆ ಮತ್ತು ಮದುವೆ ಕಾರ್ಯಗಳು ಮುಗಿದ ನಂತರ ವೀರೇಶ ಹಾಗೂ ವಧುವಿನ ಪೋಷಕರಿಗೆ ವಿಷಯ ತಿಳಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...