alex Certify ಆದರ್​ ಪೂನಾವಾಲ ಹೆಸರಲ್ಲಿ ಸೈಬರ್​ ವಂಚನೆ, ಒಂದು ಕೋಟಿ ರೂ. ಲಪಟಾಯಿಸಿದ ಖದೀಮರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದರ್​ ಪೂನಾವಾಲ ಹೆಸರಲ್ಲಿ ಸೈಬರ್​ ವಂಚನೆ, ಒಂದು ಕೋಟಿ ರೂ. ಲಪಟಾಯಿಸಿದ ಖದೀಮರು

ಕೋವಿಡ್​ ಲಸಿಕೆ ಕಾರಣಕ್ಕೆ ಪ್ರಖ್ಯಾತರಾದ ಆದರ್​ ಪೂನಾವಾಲ ಅವರ ಹೆಸರಿನಲ್ಲಿ ಸೈಬರ್​ ವಂಚಕರು ಒಂದು ಕೋಟಿ ರೂ. ವಂಚನೆ ನಡೆಸಿರುವ ಪ್ರಸಂಗ ನಡೆದಿದೆ.

ಪುಣೆ ಮೂಲದ ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಕಂಪನಿಯ ಮುಖ್ಯಸ್ಥನೆಂದು ಹೇಳಿಕೊಂಡು ಅಪರಿಚಿತ ಸೈಬರ್​ ವಂಚಕರು 1 ಕೋಟಿ ರೂ.ವನ್ನು ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಅದರ ನಿರ್ದೇಶಕರೊಬ್ಬರಿಗೆ ವಾಟ್ಸಾಪ್​ ಸಂದೇಶವನ್ನು ಕಳುಹಿಸಿದ್ದರು.

ಆ ಪ್ರಕಾರ ಕಂಪನಿಯ ಖಾತೆಯಿಂದ 1,01,01,554 ರೂ.ಗಳನ್ನು ಆ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಆದರೆ ಪೂನಾವಾಲಾ ಹಣ ವರ್ಗಾವಣೆ ಕೋರಿ ಅಂತಹ ಯಾವುದೇ ಸಂದೇಶವನ್ನು ಕಳುಹಿಸಿಲ್ಲ ಎಂದು ಕಂಪನಿಯ ಅಧಿಕಾರಿಗಳು ನಂತರ ತಿಳಿದುಕೊಂಡು ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಕಂಪನಿಯ ಫೈನಾನ್ಸ್​ ಮ್ಯಾನೇಜರ್​ ಸಾಗರ್​ ಕಿತ್ತೂರ ಅವರ ದೂರಿನ ಆಧಾರದ ಮೇಲೆ ಶುಕ್ರವಾರ ಬಂಡ್​ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್​ 7ರಂದು ಮಧ್ಯಾಹ್ನ 1.35 ರಿಂದ ಸೆಪ್ಟೆಂಬರ್​ 8 ರ ಮಧ್ಯಾಹ್ನ 2.30 ರ ನಡುವೆ ಈ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...