alex Certify BIG BREAKING: ಅಬ್ಬಲಗೆರೆಯಲ್ಲಿ ಶಂಕಿತ ಉಗ್ರನ ಕರೆತಂದು ಸ್ಥಳ ಮಹಜರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಅಬ್ಬಲಗೆರೆಯಲ್ಲಿ ಶಂಕಿತ ಉಗ್ರನ ಕರೆತಂದು ಸ್ಥಳ ಮಹಜರು

 

ಶಿವಮೊಗ್ಗ ಪೊಲೀಸರಿಂದ ಬಂಧನ ಕ್ಕೊಳಗಾಗಿರುವ ಇಬ್ಬರು ಶಂಕಿತ ಉಗ್ರರ ವಿಚಾರಣೆಯನ್ನು ತೀವ್ರಗೊಳಿಸಲಾಗಿದ್ದು, ಈ ಪೈಕಿ ಬಾಂಬ್ ಬ್ಲಾಸ್ಟ್ ನಡೆಸಲು ತಯಾರಿ ನಡೆಸಿದ್ದ ಎನ್ನಲಾದ ಸೈಯದ್ ಯಾಸಿನ್ ನನ್ನು ಶಿವಮೊಗ್ಗ ಸಮೀಪದ ಅಬ್ಬಲಗೆರೆಗೆ ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಯಾಸಿನ್ ಬಾಂಬ್ ತಯಾರಿಯ ಕುರಿತು ಮಾಹಿತಿ ಹೊಂದಿದ್ದ ಎನ್ನಲಾಗಿದ್ದು, ಹೀಗಾಗಿ ವಿಶೇಷ ದಳದ ಪೊಲೀಸರು ಎಲ್ಲ ವಿಚಾರವನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೆ ಇವರುಗಳಿಗೆ ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಸಂಪರ್ಕವೂ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಷ್ಟಕ್ಕೂ ಇವರುಗಳು ಖಾಕಿ ಬಲೆಗೆ ಬಿದ್ದಿದ್ದೆ ಒಂದು ರೋಚಕ ಸಂಗತಿ. ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಭೆ ನಡೆದ ವೇಳೆ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿ ಇರಿಯಲಾಗಿತ್ತು. ಹೀಗಾಗಿ ಜಬೀವುಲ್ಲಾ ಎಂಬವನನ್ನು ಬಂಧಿಸಲಾಗಿದ್ದು, ಆತನ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ಇವರುಗಳ ಅಸಲಿ ಮುಖ ಬಹಿರಂಗವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...