alex Certify ಇನ್ನೂ ಮುಗಿದಿಲ್ಲ ನಟ ಗೋವಿಂದ- ಅಳಿಯ ಕೃಷ್ಣಾ ಅಭಿಷೇಕ್‌ ಶೀತಲ ಸಮರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ ಮುಗಿದಿಲ್ಲ ನಟ ಗೋವಿಂದ- ಅಳಿಯ ಕೃಷ್ಣಾ ಅಭಿಷೇಕ್‌ ಶೀತಲ ಸಮರ

ಬಾಲಿವುಡ್‌ ನಟ ಹಾಗೂ ಸೂಪರ್‌ ಡ್ಯಾನ್ಸರ್‌ ಗೋವಿಂದ ಮತ್ತು ಅವರ ಸೋದರಳಿಯ ಕೃಷ್ಣಾ ಅಭಿಷೇಕ್‌ ನಡುವಿನ ಮನಸ್ತಾಪ ವಿಚಾರ ಮತ್ತು ಹಲವು ಸಂದರ್ಭಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟಗೊಳ್ಳುವುದನ್ನು ನೀವು ಕಂಡಿರುತ್ತೀರಿ.

ಇತ್ತೀಚೆಗೆ ಗೋವಿಂದ ಪತ್ನಿ ಸುನಿತಾ ಅವರನ್ನು ’ಯಾರವರು, ನನಗೆ ಗೊತ್ತೇ ಇಲ್ಲ’ ಎನ್ನುವ ಮೂಲಕ ಕೃಷ್ಣಾ ಪತ್ನಿ ಕಶ್ಮೀರಾ ಶಾ ಅವರು ಪರೋಕ್ಷವಾಗಿ ಅವಮಾನಿಸಿದ್ದಾರೆ. ಸುನಿತಾ ಕೇವಲ ಸ್ಟಾರ್‌ ನಟನ ಪತ್ನಿ ಎಂದು ಟಾಂಗ್‌ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ 2019ರಲ್ಲಿ ಕಪಿಲ್‌ ಶರ್ಮಾ ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಪತ್ನಿ ಸಮೇತ ಗೋವಿಂದ ಅವರು ಬಂದಿದ್ದರು. ಆಗ ಕಾರ್ಯಕ್ರಮದ ಭಾಗವಾಗಿದ್ದ ಕೃಷ್ಣಾ ಅವರು ಸಂಚಿಕೆಯಲ್ಲಿ ಕಾಣಿಸಿಕೊಳ್ಳಬಾರದು ಎಂದು ಸುನಿತಾ ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಇದನ್ನು ಸಂದರ್ಶನವೊಂದರಲ್ಲಿ ಕೃಷ್ಣಾ ಅವರೇ ಬಹಿರಂಗಪಡಿಸಿದ್ದಾರೆ.

BIG NEWS: ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹಾತೊರೆಯುತ್ತಿದ್ದಾರೆ; ಟೀಕೆ ಮಾಡುವುದನ್ನು ಬಿಟ್ಟು ಸಲಹೆ ನೀಡಲಿ ಎಂದ ಡಿಸಿಎಂ ಕಾರಜೋಳ

ಇನ್ನು, 2018ರಲ್ಲಿ ಸುನಿತಾ ಮತ್ತು ಕಶ್ಮೀರಾ ನಡುವೆ ಟ್ವಿಟರ್‌ ಸಮರ ಭಾರಿ ಸದ್ದು ಮಾಡಿತ್ತು. ‘ಹಣಕ್ಕಾಗಿ ಡ್ಯಾನ್ಸ್‌ ಮಾಡುವ ಜನರು’ ಎಂದು ಟ್ವೀಟ್‌ ಮಾಡಿದ್ದ ಕಶ್ಮೀರಾ ವಿರುದ್ಧ ಸುನಿತಾ ಕಿಡಿಕಾರಿದ್ದರು.

ಪತಿ ಗೋವಿಂದ ಅವರ ಬಗ್ಗೆ ಪರೋಕ್ಷವಾಗಿ ಕಶ್ಮೀರಾ ಆರೋಪ ಮಾಡಿದ್ದಾರೆ ಎಂದು ಸುನಿತಾ ಅಸಮಾಧಾನಗೊಂಡಿದ್ದರು. ಆದರೆ ನಂತರ ಕೃಷ್ಣಾ ಅವರು ಸಮಜಾಯಿಷಿ ನೀಡಲು ಬಯಸಿದ್ದರು.

ಪತ್ನಿಯ ಟೀಕೆಗಳು ತನ್ನ ಸೋದರಿ ಆರತಿ ಸಿಂಗ್‌ ಬಗ್ಗೆ ಆಗಿತ್ತು ಎಂದಿದ್ದರು. ಆದರೂ ಮಾವ-ಸೋದರಳಿಯನ ಸಂಬಂಧ ಸುಧಾರಿಸಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...