alex Certify ದೀಪಾವಳಿ ದಿನವೇ ಘೋರ ದುರಂತ: ಬಾಲ್ ಎಂದು ಭಾವಿಸಿ ಬಾಂಬ್ ಜೊತೆ ಆಟವಾಡಿದ ಮಕ್ಕಳು: ಮಗು ಸಾವು, ಮೂವರು ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ದಿನವೇ ಘೋರ ದುರಂತ: ಬಾಲ್ ಎಂದು ಭಾವಿಸಿ ಬಾಂಬ್ ಜೊತೆ ಆಟವಾಡಿದ ಮಕ್ಕಳು: ಮಗು ಸಾವು, ಮೂವರು ಗಂಭೀರ

ಕೊಲ್ಕೊತ್ತಾ: ರೈಲ್ವೆ ಹಳಿ ಬಳಿ ಮಕ್ಕಳು ಆಟವಾಡುತ್ತಿದ್ದ ವೇಳೆ ನಾಡ ಬಾಂಬ್ ಸ್ಪೋಟಗೊಂಡು ಒಂದು ಮಗು ಸಾವನ್ನಪ್ಪಿದ್ದು, ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದೆ.

ನಾಡಬಾಂಬ್ ಸ್ಪೋಟದಿಂದ 7 ವರ್ಷದ ಮಗು ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ಭಟ್ಟಾರಾದಲ್ಲಿ ನಡೆದಿದೆ. ಬಾಲ್ ಎಂದುಕೊಂಡು ಮಕ್ಕಳು ನಾಡ ಬಾಂಬ್ ಜೊತೆಗೆ ಆಟವಾಡುತ್ತಿದ್ದ ವೇಳೆ ಸ್ಪೋಟಗೊಂಡಿದೆ.

ಭಟ್ಪಾರಾದಲ್ಲಿ ದೀಪಾವಳಿಯಂದು ದುರಂತ ನಡೆದಿದೆ. ರೈಲ್ವೇ ಲೈನ್ ಮೇಲೆ ಬಿದ್ದಿರುವ ಬಾಂಬ್ ಅನ್ನು ಚೆಂಡು ಎಂದು ತಿಳಿದುಕೊಂಡು ಆಟವಾಡುವಾಗಲೇ ಅದು ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗು ಸಾವನ್ನಪ್ಪಿದ್ದು, ಜೊತೆಗಿದ್ದ ಮೂವರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಬೆಳಗ್ಗೆ ಕಂಕಿನಾರ ರೈಲು ನಿಲ್ದಾಣದ ಬಳಿಯ ರೈಲ್ವೆ ಗೇಟ್ ಸಂಖ್ಯೆ 28ರ ಬಳಿ ಈ ಘಟನೆ ನಡೆದಿದೆ. ಈ ಪ್ರದೇಶ ಭಟ್ಪರಾ ಪುರಸಭೆಯ ವಾರ್ಡ್ ನಂ. 10 ರಲ್ಲಿದೆ. ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿನ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿತು. ಪೊಲೀಸರು ಅಲ್ಲಿ ಮತ್ತೊಂದು ತಾಜಾ ಬಾಂಬ್ ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಮೂವರು ಮಕ್ಕಳು ರೈಲು ಮಾರ್ಗದ ಬದಿಯಲ್ಲಿ ತಾಜಾ ಬಾಂಬ್‌ಗಳನ್ನು ಹಾಕಿಕೊಂಡು ಆಟವಾಡಲು ಹೋಗಿದ್ದರು. ಸ್ಫೋಟದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೈಲು ಮಾರ್ಗದಲ್ಲಿ ಬಾಂಬ್ ಹೇಗೆ ಬಿದ್ದಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ. ಆರ್‌ಪಿಎಫ್ ಆ ಪ್ರದೇಶದಲ್ಲಿ ಶೋಧ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...