alex Certify ಮದ್ಯದ ಅಮಲಿನಲ್ಲಿ ಠಾಣೆಗೆ ನುಗ್ಗಿದ ಪೇದೆಯಿಂದ ರಾದ್ಧಾಂತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಿನಲ್ಲಿ ಠಾಣೆಗೆ ನುಗ್ಗಿದ ಪೇದೆಯಿಂದ ರಾದ್ಧಾಂತ….!

ಮದ್ಯದ ಅಮಲಿನಲ್ಲಿದ್ದ ಪೊಲೀಸ್​ ಪೇದೆಯೊಬ್ಬ ಕಂಟ್ರಿ ಮೇಡ್​​​ ಪಿಸ್ತೂಲ್​ನ್ನು ಹಿಡಿದು ಪೊಲೀಸ್​ ಠಾಣೆಗೆ ನುಗ್ಗಿದ್ದು ಮಾತ್ರವಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ಘಟನೆಯು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಬರೇಲಿಯ ಸುಭಾಷ್​​ನಗರ ಪೊಲೀಸ್​ ಠಾಣೆಯಲ್ಲಿ ಈ ಘಟನೆ ಸಂಭವಿಸಿದೆ.

ಆರೋಪಿ ಪೊಲೀಸ್​ ಪೇದೆಯನ್ನು ತಾರಾಚಂದ್​ ಎಂದು ಗುರುತಿಸಲಾಗಿದೆ. ಈ ಘಟನೆಯ ಬಳಿಕ ಪೊಲೀಸ್​ ಪೇದೆಯನ್ನು ಮಾನಸಿಕ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆಯಲ್ಲಿ ವೈದ್ಯರು ಪೊಲೀಸ್​ ಪೇದೆಯ ರಕ್ತದಲ್ಲಿ ಅತಿಯಾದ ಮದ್ಯ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಆರೋಪಿ ಪೊಲೀಸ್​ ಪೇದೆ ಲೋಡೆಡ್​ ಗನ್​ ಹಿಡಿದು ಠಾಣೆಗೆ ನುಗ್ಗಿದ್ದರು ಎನ್ನಲಾಗಿದೆ.

ಪೊಲೀಸ್​ ಪೇದೆ ತಾರಾಚಂದ್​ರನ್ನು ಅಮಾನತು ಮಾಡಲಾಗಿದ್ದು ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ತಾರಾಚಂದ್​ ವಿರುದ್ಧ ಐಪಿಸಿ ಸೆಕ್ಷನ್​ 3/25 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಈ ಘಟನೆ ನಡೆಯುವ ವೇಳೆ ಮುಖ್ಯ ಪೇದೆ ರಾಜೇಂದ್ರ ಸಿಂಗ್​​, ಕಂಪ್ಯೂಟರ್​ ಆಪರೇಟರ್​​ ವೀರ್​ಪಾಲ್​ ಸಿಂಗ್​ ಹಾಗೂ ಪೇದೆ ಅನ್ಮೋಲ್​ ಸಿಂಗ್​ ಠಾಣೆಯಲ್ಲಿದ್ದರು ಎನ್ನಲಾಗಿದೆ. ಸಿಂಗ್​ ನೀಡಿರುವ ಮಾಹಿತಿ ಪ್ರಕಾರ ತಾರಾಚಂದ್​​ ಲೋಡೆಡ್​ ಪಿಸ್ತೂಲ್​ ಹಿಡಿದು ಠಾಣೆಗೆ ನುಗ್ಗಿದ್ದರು ಎಂದು ತಿಳಿದು ಬಂದಿದೆ.

ಠಾಣೆಗೆ ನುಗ್ಗಿದ ತಾರಾಚಂದ್​ ಒಮ್ಮೆಲೆ ಕಿರುಚಲು ಆರಂಭಿಸಿದ್ರು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದರು. ನಾವೆಲ್ಲ ಭಯಗೊಂಡಿದ್ದೆವು ಹಾಗೂ ಅವರಿಗೆ ಶಾಂತರಾಗುವಂತೆ ಮನವಿ ಮಾಡಿದೆವು. ಹೇಗೋ ಅವರ ಗಮನವನ್ನು ಬೇರೆಡೆ ಸೆಳೆಯುವ ಮೂಲಕ ಪಿಸ್ತೂಲ್​ ಕಸಿದುಕೊಳ್ಳಲು ಯಶಸ್ವಿಯಾದೆವು. ತಾರಾಚಂದ್​ ಅತಿಯಾಗಿ ಮದ್ಯಪಾನ ಮಾಡಿದ್ದರು ಹಾಗೂ ನಮ್ಮೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಸಿಂಗ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...