alex Certify ಪತಿಯಿಂದಲೇ ಪೈಶಾಚಿಕ ಕೃತ್ಯ: ಪತ್ನಿ ಮೇಲೆ ಬಿಸಿ ಎಣ್ಣೆ ಸುರಿದ ಕಿರಾತಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯಿಂದಲೇ ಪೈಶಾಚಿಕ ಕೃತ್ಯ: ಪತ್ನಿ ಮೇಲೆ ಬಿಸಿ ಎಣ್ಣೆ ಸುರಿದ ಕಿರಾತಕ

ಲೂಧಿಯಾನ: ವರದಕ್ಷಿಣೆ ಕಿರುಕುಳ ನೀಡಿದ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಬಿಸಿ ಎಣ್ಣೆ ಸುರಿದಿರುವ ಘಟನೆ ಲೂಧಿಯಾನದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ನಗರದ ಸರಭನಗರ ನಿವಾಸಿ ಅಜಯ್‌ ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.

ಲೂಧಿಯಾನದ ಪಖೋವಾಲ್ ರಸ್ತೆಯಲ್ಲಿರುವ ವಿಕಾಸ್ ನಗರದ ಅವರ ಪತ್ನಿ 31 ವರ್ಷದ ಸಿಮ್ರಾನ್‌ ಪ್ರೀತ್ ಕೌರ್ ಅವರ ದೂರಿನ ಮೇರೆಗೆ ಅಜಯ್‌ ಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂರು ವರ್ಷದ ಮಗಳಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.

ಸಿಮ್ರಾನ್‌ ಪ್ರೀತ್ ಕೌರ್ ಅವರು ಅಜಯ್‌ಪಾಲ್ ಸಿಂಗ್ ಅವರನ್ನು ಮದುವೆಯಾದ ನಂತರದಲ್ಲಿ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದ, ಗಂಡನ ಮನೆ ಬಿಟ್ಟು ಹೋಗುವಂತೆ ಒತ್ತಾಯಿಸಿದ್ದ. ಆಕೆ ತನ್ನ ಮಗಳೊಂದಿಗೆ ವಿಕಾಸ್ ನಗರದಲ್ಲಿರುವ ಅತ್ತೆಯ ಮನೆಗೆ ತೆರಳಿದ್ದಳು ಎಂದು ವರದಿಯಾಗಿದೆ.

ಮೇ 23ರಂದು ಆಕೆ ಅಡುಗೆ ಮಾಡುತ್ತಿದ್ದಾಗ ಅಜಯ್‌ ಪಾಲ್‌ ಬಂದು ಬಾಣಲೆಯಿಂದ ಕಾದ ಎಣ್ಣೆ ತೆಗೆದುಕೊಂಡು ಆಕೆಯ ಮೇಲೆ ಸುರಿದಿದ್ದಾನೆ. ಆಕೆ ಸಹಾಯಕ್ಕಾಗಿ ಕಿರುಚಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ.

ಘಟನೆ ಬಳಿಕ ಮಹಿಳೆಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ನಂತರ ಮಹಿಳೆ ಮೇ 24 ರಂದು ಮಹಿಳಾ ಸಹಾಯವಾಣಿಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ತನ್ನ ಪತಿ ವಿರುದ್ಧ ಕೌಟುಂಬಿಕ ಹಿಂಸೆ ದೂರು ದಾಖಲಿಸಿದ್ದ ಸಿಮ್ರಾನ್ ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ ಎಂದು ಶಹೀದ್ ಭಗತ್ ಸಿಂಗ್ ನಗರ ಪೊಲೀಸ್ ಪೋಸ್ಟ್‌ ನ ಪ್ರಭಾರಿ ಸಹಾಯಕ ಸಬ್ ಇನ್ಸ್‌ ಪೆಕ್ಟರ್ ಧರ್ಮಿಂದರ್ ಕುಮಾರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...