alex Certify ಖ್ಯಾತ ನಟ, ಜ್ಯೋತಿಷಿಗೆ ಸೈಟ್ ಕೊಡಿಸುವುದಾಗಿ ವಂಚನೆ; ನಿರ್ದೇಶಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟ, ಜ್ಯೋತಿಷಿಗೆ ಸೈಟ್ ಕೊಡಿಸುವುದಾಗಿ ವಂಚನೆ; ನಿರ್ದೇಶಕ ಅರೆಸ್ಟ್

ಬೆಂಗಳೂರು: ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಟ ಹಾಗೂ ಜ್ಯೋತಿಷಿಗೆ ಟೋಪಿ ಹಾಕಿದ್ದ ನಿರ್ದೇಶಕ ಹಾಗೂ ನಿರ್ಮಾಪಕನನ್ನು ಮಹಾಲಕ್ಷ್ಮಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಲಿಯುಗದ ಕೆಲಸ’ ಚಿತ್ರ ನಿರ್ದೇಶನ ಮಾಡಿರುವ ಶ್ರೀಧರ್ ಅಲಿಯಾಸ್ ಹರಿಪ್ರಸಾದ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ರಾಜಾಜಿನಗರ ನಿವಾಸಿಯಾಗಿರುವ ಶ್ರೀಧರ್ ಮಹಾಲಕ್ಷ್ಮಿಲೇಔಟ್ ನಿವಾಸಿಯಾಗಿರುವ ಜ್ಯೋತಿಷಿ ಶಂಕರ ಹೆಗಡೆ ಅವರಿಗೆ ಕರ್ನಾಟಕ ಗೃಹ ಮಂಡಳಿಯಲ್ಲಿ ನಿವೇಶನ ಕೊಡುವುದಾಗಿ ವಂಚಿಸಿದ ಆರೋಪ ಕೇಳಿಬಂದಿದೆ.

ತಾನು ಗೃಹ ಮಂಡಳಿಯಲ್ಲಿ ಹಿರಿಯ ಅಧಿಕಾರಿಯಾಗಿರುವುದಾಗಿ ಪರಿಚಯಿಸಿಕೊಂಡಿದ್ದು, ಹಂತಹಂತವಾಗಿ 8 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದುಕೊಂಡಿದ್ದಾರೆ. ಈತನಿಂದ ವಂಚನೆಗೊಳಗಾದ ಶಂಕರ್ ಹೆಗಡೆ ಹಣ ವಾಪಸ್ ಕೇಳಿದಾಗ 3.40 ಲಕ್ಷ ರೂ. ವಾಪಸ್ ನೀಡಿ ಉಳಿದ ಹಣ ನೀಡದೆ ಸತಾಯಿಸಿದ್ದು, ವಂಚನೆಗೊಳಗಾದ ಶಂಕರ್ ಹೆಗಡೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೇ ರೀತಿ ನಟ ಶರತ್ ಲೋಹಿತಾಶ್ವ ಅವರ ಬಳಿ 60 ಲಕ್ಷ ರೂಪಾಯಿ ಪಡೆದುಕೊಂಡು ವಂಚಿಸಿದ್ದಾನೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...