alex Certify ‘ಬಕ್ರೀದ್’ ದಿನದಂದು ಮನೆಯಿಂದ ಹೊರ ಬಂದು ಅಭಿಮಾನಿಗಳಿಗೆ ವಿಶ್ ಮಾಡಿಲ್ಲ ಸಲ್ಮಾನ್…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಕ್ರೀದ್’ ದಿನದಂದು ಮನೆಯಿಂದ ಹೊರ ಬಂದು ಅಭಿಮಾನಿಗಳಿಗೆ ವಿಶ್ ಮಾಡಿಲ್ಲ ಸಲ್ಮಾನ್…! ಇದರ ಹಿಂದಿದೆ ಈ ಕಾರಣ

ಪ್ರತಿ ವರ್ಷದ ಬಕ್ರೀದ್ ಹಬ್ಬದ ದಿನದಂದು ಖ್ಯಾತ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ತಮ್ಮ ಮನೆಗಳಿಂದ ಹೊರಬಂದು ಅಭಿಮಾನಿಗಳಿಗೆ ವಿಶ್ ಮಾಡುವುದು ಈವರೆಗೂ ನಡೆದುಕೊಂಡು ಬಂದ ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಮುಂಬೈನ ತಮ್ಮ ಮನೆಯಲ್ಲಿದ್ದರೂ ಸಹ ಸಲ್ಮಾನ್ ಖಾನ್ ಹೊರಬಂದು ಅಭಿಮಾನಿಗಳಿಗೆ ವಿಶ್ ಮಾಡಿಲ್ಲ. ಇದರ ಹಿಂದೆ ಒಂದು ಕಾರಣವಿದೆ ಎಂದು ಹೇಳಲಾಗಿದೆ.

ಭಾನುವಾರ ದೇಶದಾದ್ಯಂತ ಸಡಗರ ಸಂಭ್ರಮದಿಂದ ಮುಸ್ಲಿಂ ಬಾಂಧವರು ಬಕ್ರೀದ್ ಆಚರಿಸಿದ್ದು, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಮನೆಯಲ್ಲೂ ಸಹ ಹಬ್ಬದ ಸಂಭ್ರಮವಿತ್ತು. ಪಾಪರಾಜಿಗಳು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟರ ಮುಖ ದರ್ಶನಕ್ಕಾಗಿ ಅವರುಗಳ ನಿವಾಸದ ಮುಂದೆ ಕಾದು ನಿಂತಿದ್ದರು. ಶಾರುಖ್ ಖಾನ್ ಎಂದಿನಂತೆ ತಮ್ಮ ಅಪಾರ್ಟ್ಮೆಂಟ್ ‘ಮನ್ನತ್’ ನಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿದ್ದರು. ಈ ಸಂದರ್ಭದಲ್ಲಿ ಅವರ ಪುತ್ರ 9 ವರ್ಷದ ಅಬ್ರಾಹಂ ಸಹ ಇದ್ದ.

ಆದರೆ ಸಲ್ಮಾನ್ ಖಾನ್ ನಿವಾಸದ ಬಳಿ ಕಾದು ನಿಂತಿದ್ದ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗಿತ್ತು. ಎಷ್ಟು ಹೊತ್ತಾದರೂ ಸಹ ಸಲ್ಮಾನ್ ತಮ್ಮ ಮನೆಯಿಂದ ಹೊರಬರಲಿಲ್ಲ. ಕಡೆಗೆ ಅವರುಗಳು ನಿರಾಸೆಯಿಂದ ಹಿಂದಿರುಗುವಂತಾಯಿತು. ಮೂಲಗಳ ಪ್ರಕಾರ ಸಲ್ಮಾನ್ ಖಾನ್ ತಮ್ಮ ಮನೆಯಿಂದ ಹೊರ ಬರದಿರಲು ಭದ್ರತೆಯ ಕಾರಣಕ್ಕೆ ಎಂದು ಹೇಳಲಾಗಿದೆ. ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರಿಗೆ ಪತ್ರವೊಂದು ಬಂದಿದ್ದು ಇದರಲ್ಲಿ ಕೊಲೆ ಬೆದರಿಕೆ ಹಾಕಲಾಗಿತ್ತು.

ಕುಖ್ಯಾತ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೊಯ್ ಈ ಕೊಲೆ ಬೆದರಿಕೆ ಹಾಕಿದ್ದಾನೆನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಅವರಿಗೆ ಹತ್ತು ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳ ಭದ್ರತೆಯನ್ನು ಒದಗಿಸಲಾಗಿದೆ. ಇವರುಗಳು ಸಲ್ಮಾನ್ ಖಾನ್ ಚಿತ್ರೀಕರಣಕ್ಕೆ ತೆರಳಿದ ಸಂದರ್ಭದಲ್ಲೂ ಸಹ ಭದ್ರತೆ ಒದಗಿಸುತ್ತಿದ್ದಾರೆ. ಬಕ್ರೀದ್ ಸಂದರ್ಭದಲ್ಲಿ ತಮ್ಮ ಮನೆಯಿಂದ ಹೊರ ಬರದಿರಲು ಅಧಿಕಾರಿಗಳು ಸಲಹೆ ನೀಡಿದ್ದರೆನ್ನಲಾಗಿದ್ದು, ಹೀಗಾಗಿ ಈ ಬಾರಿಯ ಬಕ್ರೀದ್ ದಿನದಂದ ಸಲ್ಮಾನ್ ಖಾನ್ ಅವರ ದರ್ಶನ ಅಭಿಮಾನಿಗಳಿಗೆ ಸಿಗಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...