alex Certify BIG SHOCKING: ಬೆಚ್ಚಿಬೀಳಿಸುವಂತಿದೆ ರಾಜ್ಯದ ಈ ಕೊರೋನಾ ದೃಶ್ಯ: ಆಸ್ಪತ್ರೆ ಎದುರಲ್ಲೇ ನರಳಾಡಿ ಪ್ರಾಣ ಬಿಟ್ಟ ಸೋಂಕಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಬೆಚ್ಚಿಬೀಳಿಸುವಂತಿದೆ ರಾಜ್ಯದ ಈ ಕೊರೋನಾ ದೃಶ್ಯ: ಆಸ್ಪತ್ರೆ ಎದುರಲ್ಲೇ ನರಳಾಡಿ ಪ್ರಾಣ ಬಿಟ್ಟ ಸೋಂಕಿತ

ಬೆಂಗಳೂರು: ನಗರದ ಹೊರವಲಯದ ಆನೇಕಲ್ ನಲ್ಲಿ ಆಸ್ಪತ್ರೆ ಎದುರಲ್ಲೇ ಕೊರೋನಾ ಸೋಂಕಿತ ನರಳಿ ಪ್ರಾಣ ಬಿಟ್ಟ ಘನಘೋರ ಘಟನೆ ನಡೆದಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರತೆ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಈ ಘಟನೆ ಬಿಂಬಿಸುವಂತಿದೆ.

ಆನೇಕಲ್ ತಾಲ್ಲೂಕು ಹಾಲ್ದೇನಹಳ್ಳಿಯ ನಿವಾಸಿಯಾಗಿದ್ದ ಸೋಂಕು ತಗಲಿದ್ದು, ಅವರಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಆದರೆ, ಪಾಸಿಟಿವ್ ಬಂದಿದ್ದರೂ ವರದಿ ಬರುವುದು ವಿಳಂಬವಾದ ಕಾರಣ ಬೆಡ್ ಸಿಕ್ಕಿರಲಿಲ್ಲ. ಆಸ್ಪತ್ರೆ ಎದುರಲ್ಲೇ ಕಾದು ಕುಳಿತಿದ್ದ ಅವರು ಸೋಂಕು ತೀವ್ರಗೊಂಡು ನರಳಾಡಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.

ಹಾಲ್ದೇನಹಳ್ಳಿ ಕೆರೆ ಸಮೀಪ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮರಾಜು ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸಾವಿಗೆ ಕಾರಣರಾದವ ಆನೇಕಲ್ ತಾಲ್ಲೂಕು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...