alex Certify ಕೊರೊನಾ ಆತಂಕದ ಮಧ್ಯೆ ‘ಕ್ರಾಂತಿ’ ಶೂಟಿಂಗ್​​ಗೆ ಚುರುಕು ಮುಟ್ಟಿಸಿದ ಚಿತ್ರತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಆತಂಕದ ಮಧ್ಯೆ ‘ಕ್ರಾಂತಿ’ ಶೂಟಿಂಗ್​​ಗೆ ಚುರುಕು ಮುಟ್ಟಿಸಿದ ಚಿತ್ರತಂಡ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಮುಂಬರುವ ಚಿತ್ರ ʼಕ್ರಾಂತಿʼ ಸಿನಿಮಾವು ಕ್ರಾಂತಿ ಎಕ್ಸ್​ಪ್ರೆಸ್​ ವೇಗದಲ್ಲಿ ಸಾಗುತ್ತಿದೆ. ಹೌದು..! ಕೊರೊನಾ ಮೂರನೇ ಅಲೆಯ ಭಯ ಇರುವ ಹಿನ್ನೆಲೆಯಲ್ಲಿ ಚಿತ್ರತಂಡವು ಯಾವುದೇ ವಿರಾಮಗಳನ್ನೂ ಪಡೆಯದೇ ತ್ವರಿತಗತಿಯಲ್ಲಿ ಶೂಟಿಂಗ್​ ನಡೆಸುತ್ತಿದೆ ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಶೈಲಜಾ ನಾಗ್​, ಹೈದರಾಬಾದ್​ ಹಾಗೂ ಬೆಂಗಳೂರಿನಾದ್ಯಂತ ಶೂಟಿಂಗ್​ ಸೆಟ್​ಗಳ ನಿರ್ಮಾಣವಾಗಿದೆ. ನಾವು ಚಿತ್ರೀಕರಣದಲ್ಲಿ ನಿರತರಾಗಿದ್ದೇವೆ ಹಾಗೂ ಈಗಾಗಲೇ ಸಿನಿಮಾದ ಚಿತ್ರೀಕರಣ 30 ಪ್ರತಿಶತದಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು.

ಸಿನಿಮಾದ ನಾಯಕನಾಗಿ ನಟಿಸುತ್ತಿರುವ ದರ್ಶನ್​ ಹಾಗೂ ನಟಿ ರಚಿತಾ ರಾಮ್​ ಕೂಡ ಚಿತ್ರತಂಡದ ಮಾತಿಗೆ ಮನ್ನಣೆ ನೀಡಿ ಯಾವುದೇ ವಿರಾಮವನ್ನು ಪಡೆಯದೇ ಸಿನಿಮಾ ಶೂಟಿಂಗ್​​ನಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

ವೀಕೆಂಡ್​​ನಲ್ಲಿ ಕೈಗಾರಿಕಾ ಕೆಲಸಗಳಿಗೆ ಅನುಮತಿ ಇರೋದ್ರಿಂದ ಶೂಟಿಂಗ್​ ಗಳನ್ನು ಬೇಗನೇ ಪೂರ್ಣಗೊಳಿಸುವ ಸಲುವಾಗಿ ವಾರಾಂತ್ಯದ ಶೂಟಿಂಗ್​ಗೂ ಚಿತ್ರತಂಡ ಸರ್ಕಾರದ ಬಳಿಕ ಅನುಮತಿ ಕೋರಿದೆ. ಕೊರೊನಾ ಮೂರನೇ ಅಲೆಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಆತಂಕಗೊಂಡಿದ್ದೆವೆ. ಆದ್ದರಿಂದ ನಾವು ದೇಶದಲ್ಲಿ ಸಾಧ್ಯವಾದಷ್ಟು ಶೂಟಿಂಗ್​ ಪೂರ್ಣಗೊಳಿಸಲು ಯತ್ನಿಸುತ್ತಿದ್ದೇವೆ. ವಿದೇಶದಲ್ಲಿಯೂ ಸಿನಿಮಾ ಶೂಟಿಂಗ್​​ಗೆ ಪ್ಲಾನ್​ ಮಾಡಿದ್ದೇವೆ. ಪರಿಸ್ಥಿತಿಗಳು ಸರಿಯಾದಾಗ ಈ ಬಗ್ಗೆ ಯೋಚಿಸುತ್ತೇವೆ ಎಂದು ಶೈಲಜಾ ನಾಗ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...