alex Certify ದರ್ಶನ್​ ಹೆಸರಲ್ಲಿ ವಂಚನೆ ಪ್ರಕರಣ: ತದ್ವಿರುದ್ಧ ಹೇಳಿಕೆ ನೀಡಿದ ದಚ್ಚು ಸ್ನೇಹಿತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್​ ಹೆಸರಲ್ಲಿ ವಂಚನೆ ಪ್ರಕರಣ: ತದ್ವಿರುದ್ಧ ಹೇಳಿಕೆ ನೀಡಿದ ದಚ್ಚು ಸ್ನೇಹಿತರು

ಸ್ಯಾಂಡಲ್​ವುಡ್​ ನಟ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ. ಬ್ಯಾಂಕ್​ ಮ್ಯಾನೇಜರ್​ ಎಂದು ಸುಳ್ಳು ಹೇಳಿಕೊಂಡು 25 ಕೋಟಿ ರೂಪಾಯಿ ವಂಚನೆಗೆ ಯತ್ನಿಸಿದ ಮಹಿಳೆ ಅರುಣಾ ಕುಮಾರಿ ವಿರುದ್ಧ ಸ್ವತಃ ದರ್ಶನ್​ ಆಪ್ತರೇ ಇದೀಗ ಗೊಂದಲದ ಹೇಳಿಕೆ ನೀಡ್ತಿರೋದು ಇನ್ನಷ್ಟು ಅನುಮಾನಕ್ಕೆ ದಾರಿ ಮಾಡಿದೆ.

ವಂಚಕಿ ಅರುಣಾ ಕುಮಾರಿ ವಿಚಾರವಾಗಿ ಮಾತನಾಡಿದ ಹರ್ಷಾ, ಅರುಣಾಕುಮಾರಿ ವಿಚಾರವಾಗಿ ನಿರ್ಮಾಪಕ ಉಮಾಪತಿ ನನಗೆ ಜೂನ್​ 16ರಂದೇ ಕರೆ ಮಾಡಿದ್ದರು. ಕೆನರಾ ಬ್ಯಾಂಕ್​ ಮ್ಯಾನೇಜರ್​ ಅರುಣಾ ಕುಮಾರಿ ನನ್ನನ್ನ ಭೇಟಿಯಾಗಿದ್ದರು. ನೀನು 25 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೀಯಾ..? ಈ ಸಾಲಕ್ಕೆ ಭದ್ರತೆ ನೀಡುವ ಸಲುವಾಗಿ ನಿನ್ನ ಹಾಗೂ ದರ್ಶನ್​ ಆಸ್ತಿ ಪತ್ರದ ಮೇಲೆ ನಕಲು ಸಹಿ ಮಾಡಿದ್ದೀಯಾ ಎಂದು ಕೇಳಿದ್ದರು ಎಂದು ಹೇಳಿದ್ದಾರೆ.

ಆದರೆ ನಿರ್ಮಾಪಕ ಉಮಾಪತಿ ಮಾತ್ರ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಅರುಣಾ ಕುಮಾರಿ ಬಗ್ಗೆ ಹರ್ಷಾ ಮೆಲಿಂಟಾಗೆ ಮೊದಲೇ ಗೊತ್ತಿತ್ತು. ಅರುಣಾ ಕುಮಾರಿ ಪತಿ ಹರ್ಷ ಬಳಿಯಲ್ಲೇ ಕೆಲಸ ಮಾಡುತ್ತಾರೆ. ನನಗೆ ಆಕೆಯ ಪರಿಚಯವೇ ಇಲ್ಲ. ಆದರೆ ಹರ್ಷಗೆ ಆಕೆಯ ಪರಿಚಯ ಇದೆ. ಏಪ್ರಿಲ್​ನಲ್ಲಿ ಆಸ್ತಿ ಖರೀದಿ ವಿಚಾರದಲ್ಲಿ ನನಗೆ ಆಕೆಯ ಪರಿಚಯವಾಗಿತ್ತು . ಈಗ ಎಲ್ಲರೂ ಸೇರಿ ನನ್ನನ್ನ ದೂರುತ್ತಿದ್ದಾರೆ. ನಾನು ಯಾರ ವಿರುದ್ಧವೂ ದೂರನ್ನ ಸಲ್ಲಿಸಿಲ್ಲ. ಕೇವಲ ಅರುಣಾ ಕುಮಾರಿ ಫೋರ್ಜರಿ ವಿಚಾರವಾಗಿ ಮಾತ್ರ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...