alex Certify ನಟ ದರ್ಶನ್ ಬಾಡಿಗಾರ್ಡ್ ನಿಂದ ಹಲ್ಲೆ ಆರೋಪ: ಪೊಲೀಸರಿಗೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ದರ್ಶನ್ ಬಾಡಿಗಾರ್ಡ್ ನಿಂದ ಹಲ್ಲೆ ಆರೋಪ: ಪೊಲೀಸರಿಗೆ ದೂರು

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಾಡಿಗಾರ್ಡ್ ಮತ್ತು ಇತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಕೆ.ಪಿ. ದಯಾನಂದ್ ಎಂಬುವರು ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಫೆ. 16 ರಂದು ಸಂಜೆ ದರ್ಶನ್ ಅವರ ಜನ್ಮದಿನದ ಕಾರ್ಯಕ್ರಮದ ಚಿತ್ರೀಕರಣಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ‘ವಿ2 ನ್ಯೂಸ್’ youtube ಚಾನೆಲ್ ಕ್ಯಾಮೆರಾಮನ್ ದಯಾನಂದ್ ಅವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಲಾಗಿದೆ.

ಮನೆ ಬಳಿ ಅಭಿಮಾನಿಗಳು ಸೇರಿದ್ದ ವೇಳೆ ದರ್ಶನ್ ಅವರು ಇರಲಿಲ್ಲ ಎಂಬುದು ನಮಗೆ ಗೊತ್ತಿರಲಿಲ್ಲ. ಚಿತ್ರೀಕರಣ ಮಾಡುವಾಗ ಬಾಡಿಗಾರ್ಡ್ ಮತ್ತು ಕೆಲವರು ಅಡ್ಡಿಪಡಿಸಿ ಕ್ಯಾಮೆರಾ, ಮೊಬೈಲ್ ಕಸಿದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದ್ದು, ದೂರಿನಲ್ಲಿ ಗೊಂದಲ ಇರುವ ಕಾರಣ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಎನ್.ಸಿ.ಆರ್. ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...