alex Certify ಅರಬ್ಬಿಸಮುದ್ರದಲ್ಲಿ ‘ಬಿಪರ್ ಜಾಯ್’ ಚಂಡಮಾರುತ ಆರ್ಭಟ: ಇಂದು ಗುಜರಾತ್ ಗೆ ಅಪ್ಪಳಿಸಲಿದೆ ಸೈಕ್ಲೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಬ್ಬಿಸಮುದ್ರದಲ್ಲಿ ‘ಬಿಪರ್ ಜಾಯ್’ ಚಂಡಮಾರುತ ಆರ್ಭಟ: ಇಂದು ಗುಜರಾತ್ ಗೆ ಅಪ್ಪಳಿಸಲಿದೆ ಸೈಕ್ಲೋನ್

ಅಹಮದಾಬಾದ್: ಅರಬ್ಬಿಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ ಆರ್ಭಟಿಸುತ್ತಿದ್ದು, ಗುಜರಾತ್ ಸಮುದ್ರ ತೀರಕ್ಕೆ ಅಪ್ಪಳಿಸಲಿದೆ. ಮಧ್ಯಾಹ್ನ 3 ಗಂಟೆಗೆ ಬಿಪರ್ ಜಾಯ್ ಚಂಡಮಾರುತ ತೀರಕ್ಕೆ ಅಪ್ಪಳಿಸಲಿದೆ. ಚಂಡಮಾರುತ ಅಪ್ಪಳಿಸಲಿರುವ ಹಿನ್ನಲೆಯಲ್ಲಿ ಇಂದು 9 ರಾಜ್ಯಗಳಲ್ಲಿ ಭಾರಿ ಮಳೆ ಆಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ಭೀತಿ ಸೃಷ್ಟಿಸಿರುವ ಚಂಡಮಾರುತ ಗುಜರಾತ್ ನ ಕಛ್ ಜಿಲ್ಲೆಯ ಜಕಾವು ಬಂದರಿಗೆ ಅಪ್ಪಳಿಸಲಿದ್ದು, ಸಂಭಾವ್ಯ ಅನಾಹುತ ನಿಯಂತ್ರಿಸಲು 75,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಈಗಾಗಲೇ ಚಂಡಮಾರುತ ಪರಿಣಾಮ ಗುಜರಾತ್ ನ ಹಲವೆಡೆ ಭಾರಿ ಮಳೆಯಾಗಿದೆ. ದ್ವಾರಕ, ಜಾಮ್ ನಗರ, ಪೋರಬಂದರ್, ರಾಜಕೋಟ್ ಜಿಲ್ಲೆಗಳ 9 ತಾಲೂಕುಗಳಲ್ಲಿ ಅತಿಹೆಚ್ಚು ಮಳೆಯಾಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದ್ದು, ಆರು ಅಡಿ ಎತ್ತರದವರೆಗೂ ಅಲೆ ಏಳಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...