alex Certify ನದಿ ಪಕ್ಕ ವಾಕಿಂಗ್ ಹೋದಾಗಲೇ ದಿಢೀರನೇ ಎಳೆದೊಯ್ದ ಮೊಸಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನದಿ ಪಕ್ಕ ವಾಕಿಂಗ್ ಹೋದಾಗಲೇ ದಿಢೀರನೇ ಎಳೆದೊಯ್ದ ಮೊಸಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಶನಿವಾರ ಸಂಜೆ ನದಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿದೆ.

ಸುರೇಶ್(44) ಮೊಸಳೆ ದಾಳಿಗೆ ಒಳಗಾದವರು ಎಂದು ಹೇಳಲಾಗಿದೆ. ದಾಂಡೇಲಿಯ ಆಲೈಡ್ ಏರಿಯಾ ಸಮೀಪ ನದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ದಿಢೀರ್ ದಾಳಿ ಮಾಡಿದ ಮೊಸಳೆ ಅವರನ್ನು ಎಳೆದೊಯ್ದಿದೆ. ಘಟನೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಡಿವೈಎಸ್ಪಿ ಕೆ.ಎಲ್. ಗಣೇಶ್, ಪೌರಾಯುಕ್ತ ರಾಜಾರಾಮ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರೇಶ್ ಅವರಿಗಾಗಿ ನದಿಯಲ್ಲಿ ತೀವ್ರ ಹುಡುಕಾಟ ನಡೆಸಲಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...