alex Certify ಕುಮಾರಸ್ವಾಮಿ ರಾಜಕೀಯದ ಜೋಕರ್, ಯೋಗೇಶ್ವರ್ ಇನ್ನು ಬಚ್ಚಾ: ಏಟು –ತಿರುಗೇಟು; ಏಕವಚನದಲ್ಲೇ ನಾಯಕರ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಮಾರಸ್ವಾಮಿ ರಾಜಕೀಯದ ಜೋಕರ್, ಯೋಗೇಶ್ವರ್ ಇನ್ನು ಬಚ್ಚಾ: ಏಟು –ತಿರುಗೇಟು; ಏಕವಚನದಲ್ಲೇ ನಾಯಕರ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯ ನೈತಿಕತೆ ಇಲ್ಲ. ಅವರು ಜೋಕರ್ ಇದ್ದ ಹಾಗೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ. ಯೋಗೇಶ್ವರ್, ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣ ಮಾಡುತ್ತಾರೆ. ಅಧಿಕಾರ ಸಿಕ್ಕ ಕಡೆಗೆ ಹೋಗುವ ಅವರಿಗೆ ನೈತಿಕತೆ ಇಲ್ಲ. ಅವರು ಜೋಕರ್ ಇದ್ದ ಹಾಗೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನರ ಭೇಟಿ ಮಾಡದ ಅವರು ಈಗ ಕ್ಷೇತ್ರಕ್ಕೆ ಭೇಟಿ ನೀಡಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಏಕವಚನದಲ್ಲೇ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನನ್ನ ಮುಂದೆ ಯೋಗೇಶ್ವರ್ ಇನ್ನೂ ಬಚ್ಚಾ ಎಂದು ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವನು. ಯಾರೋ ಅಡವಿಟ್ಟ ಇಸ್ಪೀಟ್ ದುಡ್ಡಲ್ಲಿ ನೋಚತನದಿಂದ ಮಂತ್ರಿಯಾಗಿದ್ದಾನೆ. ನನ್ನ ಬಗ್ಗೆ ಹಗುರವಾಗಿ ಏಕವಚನದಲ್ಲಿ ಮಾತನಾಡಬೇಡ. ನಿನಗಿಂತಲೂ ಲಘುವಾಗಿ ಮಾತನಾಡಲು ನನಗೆ ಬರುತ್ತದೆ. ಸಚಿವನಾಗಿದಿಯಾ ಗೌರವದಿಂದ ಕೆಲಸ ಮಾಡಿಕೊಂಡು ಹೋಗು ಎಂದು ವಾರ್ನಿಂಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...