alex Certify ಬೀದಿ ನಾಯಿಗೆ ಕಲ್ಲು ಎಸೆದವರ ವಿರುದ್ಧ ಠಾಣೆ ಮೆಟ್ಟಿಲೇರಿದ ದಂಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ನಾಯಿಗೆ ಕಲ್ಲು ಎಸೆದವರ ವಿರುದ್ಧ ಠಾಣೆ ಮೆಟ್ಟಿಲೇರಿದ ದಂಪತಿ….!

ನೆರೆಮನೆಯವರು ಬೀದಿ ನಾಯಿಗಳ ಮೇಲೆ ತೋರುತ್ತಿದ್ದ ಅಟ್ಟಹಾಸವನ್ನು ಸಹಿಸಲಾಗದ ದಂಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನೆರೆ ಮನೆಯವರ ಈ ಕೆಟ್ಟ ಬುದ್ಧಿಯಿಂದ ನೊಂದಿದ್ದ ದಂಪತಿ ಪೊಲೀಸ್​​ ಠಾಣೆಗೆ ತೆರಳಿದ್ದಾರೆ. ಆರೋಪಿಗಳು ಬೀದಿ ನಾಯಿಗಳ ಮೇಲೆ ಕಲ್ಲು ಎಸೆದಿದ್ದಾರೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಮಲ್ಲೇಶ್ವರಂ ನಿವಾಸಿಗಳಾದ ದಂಪತಿ ನೀಡಿರುವ ಮಾಹಿತಿಯ ಪ್ರಕಾರ ನಾಯಿಯು ಇತ್ತೀಚೆಗಷ್ಟೇ ಕ್ಯಾನೈನ್ ಡಿಸ್ಟೆಂಪರ್ ಕಾಯಿಲೆಯಿಂದ ಗುಣಮುಖವಾಗಿದೆ. ಹಾಗೂ ಆ ಶ್ವಾನಕ್ಕೆ ಬಾಯಿ ತೆರೆಯಲು ಆಗುವುದಿಲ್ಲ ಎಂದು ತಿಳಿದುಬಂದಿದೆ.

ಅನುರಾಧಾ ಹಾಗೂ ಶ್ರೀನಿವಾಸ್​​ ದಂಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದವರಾಗಿದ್ದಾರೆ. ನಿವೃತ್ತ ಎಂಎನ್​ಸಿ ಉದ್ಯೋಗಿಯಾಗಿರುವ ಶ್ರೀನಿವಾಸ್​ ತಮ್ಮ ಪತ್ನಿಯ ಸಹಾಯದಿಂದ ಮಲ್ಲೇಶ್ವರಂ 13ನೇ ಕ್ರಾಸ್​ನಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೆರೆಹೊರೆಯವರು ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ, ಅವು ನಮ್ಮ ಮೇಲೆ ದಾಳಿ ಮಾಡಬಹುದು ಎಂಬ ವದಂತಿ ಹಬ್ಬಿಸಿದ್ದರು.

ಆದರೆ ದಂಪತಿ ಹೇಳುವಂತೆ ಈ ಶ್ವಾನವು ಆಕ್ರಮಣ ಮಾಡುವ ಸ್ಥಿತಿಯಲ್ಲಿಯೇ ಇಲ್ಲ. ಮೂರು ವರ್ಷದ ಹಿಂದಿನಿಂದಲೇ ಶ್ವಾನವು ಏರಿಯಾದಲ್ಲಿ ವಾಸವಿದೆ. ಆದರೆ ನೆರೆಹೊರೆಯವರು ಶ್ವಾನಕ್ಕೆ ಕಲ್ಲು ಎಸೆಯುತ್ತಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ದೂರು ನೀಡುವ ವೇಳೆಯಲ್ಲಿ ಪೊಲೀಸರು ಸಹ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...