alex Certify 3 ನೇ ಅಲೆಯಲ್ಲಿ ಒಂದೇ ದಿನ ದಾಖಲೆಯ 81 ಜನರ ಜೀವ ತೆಗೆದ ಕೊರೋನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ನೇ ಅಲೆಯಲ್ಲಿ ಒಂದೇ ದಿನ ದಾಖಲೆಯ 81 ಜನರ ಜೀವ ತೆಗೆದ ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ 20,505 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 81 ಜನ ಸೋಂಕಿತರು ಮೃತಪಟ್ಟಿದ್ದಾರೆ. 40,903 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 38,44,338 ಕ್ಕೆ ಏರಿಕೆಯಾಗಿದೆ. ಇದುವರೆಗೆ 39,137 ಜನ ಸೋಂಕಿತರು ಮೃತಪಟ್ಟಿದ್ದಾರೆ. 36,27,925 ಜನ ಗುಣಮುಖರಾಗಿದ್ದಾರೆ. ನಿನ್ನೆಯವರೆಗೆ ರಾಜ್ಯದಲ್ಲಿ 1,77,244 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ನಿನ್ನೆ 8850 ಜನರಿಗೆ ಸೋಂಕು ತಗುಲಿದ್ದು, 13 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 21,493 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 92,469 ಸಕ್ರಿಯ ಪ್ರಕರಣಗಳಿವೆ.

ಬೆಳಗಾವಿ 1060, ಮೈಸೂರು 1209, ಶಿವಮೊಗ್ಗ 715, ತುಮಕೂರು 762 ಹೊಸ ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರ 13, ದಕ್ಷಿಣಕನ್ನಡ 10, ಮಂಡ್ಯ 6, ಮೈಸೂರು 6, ಶಿವಮೊಗ್ಗ 5, ತುಮಕೂರು 5 ಸೇರಿ ರಾಜ್ಯದಲ್ಲಿ 81 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...