alex Certify ತನ್ನನ್ನು ಕಚ್ಚಿ ಸತ್ತು ಹೋದ ಹಾವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ ಕುಡುಕ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನನ್ನು ಕಚ್ಚಿ ಸತ್ತು ಹೋದ ಹಾವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ ಕುಡುಕ…..!

ಸಾಮಾನ್ಯವಾಗಿ ಕಾಳಿಂಗ ಸರ್ಪ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಅವು ಹೆಚ್ಚು ವಿಷಕಾರಿ ಮತ್ತು ಅವು ಕಚ್ಚಿದರೆ ಕೇವಲ 15-20 ನಿಮಿಷಗಳಲ್ಲಿ ಮನುಷ್ಯರು ಸಾಯುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಕುಡುಕನೊಬ್ಬ ಕಾಳಿಂಗ ಸರ್ಪ ತನ್ನನ್ನು ಕಚ್ಚಿ ತಾನೇ ಸತ್ತಿದೆ ಎಂದು ಹೇಳಿಕೊಂಡಿದ್ದಾನೆ.

ಉತ್ತರ ಪ್ರದೇಶದ ಕುಶಿನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ವ್ಯಕ್ತಿಯೊಬ್ಬ ಆಗಮಿಸಿದ್ದ, ಕಾಳಿಂಗ ಸರ್ಪ ತನ್ನ ದೇಹಕ್ಕೆ ಎರಡು ಬಾರಿ ಕಚ್ಚಿದೆ, ಬಳಿಕ ಹಾವು ಶೀಘ್ರದಲ್ಲೇ ಸತ್ತಿದೆ ಎಂದು ಹೇಳಿದ್ದಾನೆ. ಇದನ್ನು ಸಾಬೀತುಪಡಿಸಲು, ವ್ಯಕ್ತಿ ಸತ್ತ ಹಾವನ್ನು ತನ್ನೊಂದಿಗೆ ಪಾಲಿಥಿನ್‌ನಲ್ಲಿ ಆಸ್ಪತ್ರೆಗೆ ತಂದಿದ್ದ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಅಲ್ಲಿ ವ್ಯಕ್ತಿ ಆಸ್ಪತ್ರೆಯ ಹಾಸಿಗೆಯ ಮೇಲೆ ವೈದ್ಯರೊಂದಿಗೆ ಮಾತನಾಡುವಾಗ ಅಮಲೇರಿದ ಸ್ಥಿತಿಯಲ್ಲಿ ಕುಳಿತಿರುವುದನ್ನು ಕಾಣಬಹುದು.

ಆ ವ್ಯಕ್ತಿ ತನ್ನ ಕಾಲಿಗೆ ಹಾವು ಕಚ್ಚಿದ್ದನ್ನು ತೋರಿಸಿ ತನಗೆ ಬೇಕಾದ ಚುಚ್ಚುಮದ್ದು ನೀಡುವಂತೆ ವೈದ್ಯರಲ್ಲಿ ಕೇಳಿಕೊಂಡಿದ್ದಾನೆ. ಈ ವಿಡಿಯೋ ಸಾವಿರಾರು ವೀಕ್ಷಣೆ ಮತ್ತು ಲೈಕ್‌ಗಳೊಂದಿಗೆ ವೈರಲ್ ಆಗಿದ್ದು, ನೆಟ್ಟಿಗರು ಆಚ್ಚರಿ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...