alex Certify ಪುತ್ರಿಗೆ ಬಾಲ್ಯವಿವಾಹ ವಿರೋಧಿಸಿದ ಪತ್ನಿ ಕಾಲು ಮುರಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿಗೆ ಬಾಲ್ಯವಿವಾಹ ವಿರೋಧಿಸಿದ ಪತ್ನಿ ಕಾಲು ಮುರಿದ ಪತಿ

ಬೆಳಗಾವಿ: ಮಗಳಿಗೆ ಬಾಲ್ಯ ವಿವಾಹ ಬೇಡ ಎಂದಿದ್ದಕ್ಕೆ ಪತಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಾಲು ಮುರಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ.

ಮಗಳ ವಯಸ್ಸು ಚಿಕ್ಕದು, ಮದುವೆ ಬೇಡ ಎಂದಿದ್ದಕ್ಕೆ ಬೀರಪ್ಪ ಪತ್ನಿ ಮಾಯವ್ವ ಮೇಲೆ ಮಾಡಿದ್ದಾನೆ. ಹುಡುಗ ಹುಚ್ಚನ ತರ ಇದ್ದಾನೆ ಮದುವೆ ಬೇಡ ಎಂದು ಪತ್ನಿ ಹೇಳಿದ್ದರು. ಹೊಲ ಜಾಸ್ತಿ ಇದೆ, ಆಸ್ತಿ ಸಿಗುತ್ತೆ ಎಂಬುದು ಬೀರಪ್ಪನ ಲೆಕ್ಕಾಚಾರವಾಗಿದ್ದು, ಪತಿಯ ನಿರ್ಧಾರಕ್ಕೆ ಪತ್ನಿ ವಿರೋಧಿಸಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾನೆ.

ಮಗಳಿಗೆ 13 ವರ್ಷ ಈಗಲೇ ಮದುವೆ ಬೇಡ. ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸೋಣ ಎಂದು ಪತಿಗೆ ಬುದ್ಧಿವಾದ ಹೇಳಿದ್ದಕ್ಕೆ ಮಾಯವ್ವ ಮೇಲೆ ಹಲ್ಲೆ ಬೀರಪ್ಪ ಹಲ್ಲೆ ಮಾಡಿದ್ದಾನೆ. ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಮಾಯವ್ವ ದಾಖಲಾಗಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...