alex Certify ಬೆಳಿಗ್ಗೆ ಎದ್ದ ಕೂಡಲೇ ನರಿ ಮುಖ ನೋಡಿದ್ರೆ ಅದೃಷ್ಟ ಖುಲಾಯಿಸುತ್ತೆ ಎಂದು ನರಿ ಸಾಕಿದ್ದ ಕೋಳಿ ಫಾರಂ ಮಾಲೀಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಿಗ್ಗೆ ಎದ್ದ ಕೂಡಲೇ ನರಿ ಮುಖ ನೋಡಿದ್ರೆ ಅದೃಷ್ಟ ಖುಲಾಯಿಸುತ್ತೆ ಎಂದು ನರಿ ಸಾಕಿದ್ದ ಕೋಳಿ ಫಾರಂ ಮಾಲೀಕ ಅರೆಸ್ಟ್

ಬೆಳಿಗ್ಗೆ ಎದ್ದ ಕೂಡಲೇ ನರಿ ಮುಖ ನೋಡಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ಮೂಢನಂಬಿಕೆಯಿಂದ ಕೋಳಿಫಾರಂ ಮಾಲೀಕನೊಬ್ಬ ಅಕ್ರಮವಾಗಿ ನರಿ ಸಾಕಿದ್ದು, ಈಗ ಜೈಲು ಸೇರಿದ್ದಾನೆ.

ತುಮಕೂರು ಜಿಲ್ಲೆ ಹೆಬ್ಬೂರು ಸಮೀಪದ ನಾಗವಲ್ಲಿ ಗ್ರಾಮದ ಲಕ್ಷ್ಮಿಕಾಂತ್ ಬಂಧಿತ ಆರೋಪಿ. ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಆರೋಪಿಯನ್ನು ಬಂಧಿಸಿ ಕೋಳಿ ಫಾರಂನಲ್ಲಿ ಸಾಕಿದ್ದ ನರಿಯನ್ನು ರಕ್ಷಣೆ ಮಾಡಿದ್ದಾರೆ.

7 ತಿಂಗಳ ಹಿಂದೆ ಕೆರೆ ಸಮೀಪ ನರಿ ಮರಿಗಳು ಸಿಕ್ಕಿದ್ದು, ಅದರಲ್ಲಿ ಒಂದು ಮರಿಯನ್ನು ತಂದು ಪಂಜರದಲ್ಲಿಟ್ಟು ಲಕ್ಷ್ಮಿಕಾಂತ್ ಸಾಕುತ್ತಿದ್ದ. ಮೂಢನಂಬಿಕೆಯಿಂದ ಈ ರೀತಿ ಲಕ್ಷ್ಮಿಕಾಂತ್ ನರಿ ಸಾಕಿದ್ದು, ಮಾಹಿತಿ ತಿಳಿದ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...