ಚುನಾವಣೆಯ ಸಮಯದಲ್ಲಿ ಡಿಎಂಕೆ ನಾಯಕರು ಓಲ್ಡ್ ಮಹಾಬಲಿಪುರಂ ನಿವಾಸಿಗಳಿಗೆ ನೀಡಿದ್ದ ಭರವಸೆ ಏನೆಂದರೆ, ಟೋಲ್ ಪ್ಲಾಜಾಗಳಲ್ಲಿನ ಶುಲ್ಕ ಸಂಗ್ರಹದ ಹೊರೆಯನ್ನು ಇಳಿಸುವುದು.
ಆದರೆ ಸದ್ಯಕ್ಕೆ ಮೆಟ್ರೋ ರೈಲು ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯುವ ಕಾರಣ, 4 ಟೋಲ್ಗಳಲ್ಲಿ ಮಾತ್ರವೇ ಶುಲ್ಕ ಸಂಗ್ರಹ ಇರಲ್ಲ. ಉಳಿದಂತೆ ವಾಹನ ಚಾಲಕರು ಟೋಲ್ ಕಟ್ಟಬೇಕು ಎಂಬ ಅರೆಬರೆ ನಿಯಮವನ್ನು ಜಾರಿಗೆ ತರಲಾಗಿದೆ.
ಇದಕ್ಕೆ ಓಲ್ಡ್ ಮಹಾಬಲಿಪುರಂ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆನೆಗುದಿಗೆ ಬಿದ್ದಿರುವ ಬ್ರಾಹ್ಮಣೇತರ ಪೂಜಾರಿಗಳ ನೇಮಕಾತಿ
ಸದ್ಯಕ್ಕೆ ಕಣ್ಣೊರೆಸುವ ತಂತ್ರವಾಗಿ ಶುಲ್ಕ ಮನ್ನಾ ಮಾಡುವ ಸರ್ಕಾರ, ಕೆಲವು ತಿಂಗಳ ಬಳಿಕ ಎರಡು ಪಟ್ಟು ಶುಲ್ಕ ಹೇರಿ ವಸೂಲಿ ಮಾಡಲಿದೆ ಎಂದು ಮಾಧ್ಯಮಗಳ ಎದುರು ನಿವಾಸಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶ್ರೀಪೆರುಂಬುದೂರ್, ಚೆನ್ನಸಮುದ್ರಂ, ವಾಣಾಗರಂ, ಪರನೂರು, ಸುರಾಪಟ್ಟುನಲ್ಲಿ ಟೋಲ್ ಪ್ಲಾಜಾಗಳಿವೆ.