alex Certify ತಿಂಗಳಿಗೆ ಒಂದು ಮನೆ ದರೋಡೆ ಮಾಡಿ ಸಿಕ್ಕಿಬಿದ್ದ ಕಳ್ಳ ಹೇಳಿದ ರೋಚಕ ಕಥೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಗಳಿಗೆ ಒಂದು ಮನೆ ದರೋಡೆ ಮಾಡಿ ಸಿಕ್ಕಿಬಿದ್ದ ಕಳ್ಳ ಹೇಳಿದ ರೋಚಕ ಕಥೆ….!

ಚೆನ್ನೈ: ಕಳೆದ ಹಲವು ವರ್ಷಗಳಿಂದ ದರೋಡೆ ಮಾಡುತ್ತಿದ್ದ ಕಳ್ಳನೊಬ್ಬನ ವಿಲಕ್ಷಣ ಗುಣವೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ದರೋಡೆಕೋರ ತಿಂಗಳಿಗೆ ಒಂದು ದಿನ ಒಂದು ಮನೆ ದರೋಡೆ ಮಾಡುತ್ತಿದ್ದು, ಅದಕ್ಕೆ ಕಾರಣ ಬಡವರಿಗೆ ಸಹಾಯ ಮಾಡಲು ! ಇಂಥ ಒಬ್ಬ ಕಳ್ಳನೀಗ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ 11 ಪವನ್ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

1993 ರ ತಮಿಳು ಚಲನಚಿತ್ರ, ನಟ ಅರ್ಜುನ್ ನಟಿಸಿದ ಮತ್ತು ಶಂಕರ್ ನಿರ್ದೇಶಿಸಿದ ಜೆಂಟಲ್‌ಮ್ಯಾನ್ ಕೂಡ ಇದೇ ರೀತಿಯ ಕಥೆಯನ್ನು ಹೊಂದಿದ್ದು, ಇದೀಗ ಸಿಕ್ಕಿಬಿದ್ದಿರುವ ಎಗ್ಮೋರ್‌ನ ರಸ್ತೆ ಬದಿಯಲ್ಲಿ ವಾಸಿಸುವ 33 ವರ್ಷದ ಅನ್ಬುರಾಜ್​ನದ್ದೂ ಅದೇ ಕಥೆ.

ಇತ್ತೀಚೆಗೆ, ಚೆನ್ನೈ ನಿವಾಸಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಮನೆಯ ಲೂಟಿ ಮಾಡಲಾಗಿತ್ತು. ಇದರ ಬೆನ್ನತ್ತಿ ಹೋಗಿದ್ದ ಪೊಲೀಸರ ಕೈಗೆ ಅನ್ಬುರಾಜ್​ ಸಿಕ್ಕಿಬಿದ್ದಿದ್ದ. ಎಗ್ಮೋರ್ ರೈಲು ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತು ದಿನಗಳಿಗೂ ಹೆಚ್ಚು ಕಾಲ ಶೋಧ ನಡೆಸಿದ ಅಪರಾಧ ವಿಭಾಗದ ಪೊಲೀಸರು ಆತನನ್ನು ಬಂಧಿಸಿದ್ದರು.

ಈತನ ಇತಿಹಾಸ ಕೆದಕಿದಾಗ ಪೊಲೀಸರು ಅಚ್ಚರಿಗೊಂಡಿದ್ದರು. ಏಕೆಂದರೆ ಕಳೆದ ನಾಲ್ಕು ತಿಂಗಳಲ್ಲಿ ಪೆರುಂಗಲತ್ತೂರ್ ಪ್ರದೇಶವೊಂದರಲ್ಲೇ ಪ್ರತಿ ತಿಂಗಳು ಒಂದು ಮನೆಯನ್ನು ಲೂಟಿ ಮಾಡುತ್ತಿದ್ದ ಈತ. ಕೊನೆಗೆ ಆತ ಇದನ್ನೆಲ್ಲಾ ಬಡವರಿಗೆ ನೀಡುತ್ತಿದ್ದ ಎನ್ನುವ ವಿಷಯ ತಿಳಿದಿದ್ದು, ತನಿಖೆ ಮುಂದುವರೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...