alex Certify BIG BREAKING: ಏನೇ ಆಗ್ಲಿ ಕೊನೆವರೆಗೂ ಬಿಡಲ್ಲ -ಸಿಡಿ ಪ್ರಕರಣದ ದೂರು ನೀಡಿದ ರಮೇಶ ಜಾರಕಿಹೊಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಏನೇ ಆಗ್ಲಿ ಕೊನೆವರೆಗೂ ಬಿಡಲ್ಲ -ಸಿಡಿ ಪ್ರಕರಣದ ದೂರು ನೀಡಿದ ರಮೇಶ ಜಾರಕಿಹೊಳಿ

ಬೆಂಗಳೂರು: ನಾನು ಅಧಿಕೃತವಾಗಿ ದೂರು ಕೊಟ್ಟಿದ್ದೇನೆ. ಮಾಧ್ಯಮಗಳೆದುರು ಬರದಂತೆ ವಕೀಲರು ತಿಳಿಸಿದ್ದರಾದರೂ ನೀವೆಲ್ಲರೂ ಕಾಯುತ್ತಿರುವ ಕಾರಣ ಬಂದು ಹೇಳಿಕೆ ಕೊಡುತ್ತಿದ್ದೇನೆ. ನಾನು ಕಾನೂನು ತಜ್ಞನಲ್ಲ. ವಕೀಲರ ಸಲಹೆ ಪಡೆದು ದೂರು ನೀಡಿದ್ದೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.

ದೂರಿನಲ್ಲಿ ನಾನು ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಕಾನೂನು ಪ್ರಕಾರ ನಾನು ಹೆಸರು ಉಲ್ಲೇಖಿಸಿಲ್ಲ. ದೂರು ದಾಖಲಾದ ಪ್ರತಿ ನನಗೆ ಸಿಕ್ಕಿದೆ. ನಕಲಿ ಸಿಡಿ ಸಂಬಂಧ ದೂರು ನೀಡಿದ್ದೇನೆ. ಮಹಾನಾಯಕರು, ಸಣ್ಣ ನಾಯಕರು ಎಂಬುದು ಇಲ್ಲಿ ಮುಖ್ಯವಲ್ಲ. ಕಾನೂನು ಯಾರನ್ನೂ ಬಿಡುವುದಿಲ್ಲ. ಈ ರೀತಿ ಬೋಗಸ್ ಸಿಡಿ ತಂದು ಬ್ಲಾಕ್ಮೇಲ್ ಮಾಡುವುದನ್ನು ನಿಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ.

ಯಾವುದೇ ತನಿಖಾ ಪ್ರಶ್ನೆ ಕೇಳಬೇಡಿ. ನಾನು ಕಾನೂನು ಪಂಡಿತನಲ್ಲ, ರಾಜಕಾರಣಿ. ವಕೀಲರು, ಪೊಲೀಸರು ಎಲ್ಲವನ್ನು ನೋಡಿಕೊಳ್ತಾರೆ. ಏನೇ ಆಗ್ಲಿ ಕೊನೆವರೆಗೂ ಬಿಡಲ್ಲ. ನಾವು ಕಾನೂನು ಪ್ರಕಾರ ಮುಂದುವರೆಯುತ್ತೇವೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...