alex Certify ಸಿಡಿ ಪ್ರಕರಣ: SIT ಗೆ ಯುವತಿ ಹೇಳಿಕೆ, ಆರೋಪಿ ಬಂಧಿಸಲು ವಕೀಲ ಜಗದೀಶ್ ಕುಮಾರ್ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿ ಪ್ರಕರಣ: SIT ಗೆ ಯುವತಿ ಹೇಳಿಕೆ, ಆರೋಪಿ ಬಂಧಿಸಲು ವಕೀಲ ಜಗದೀಶ್ ಕುಮಾರ್ ಆಗ್ರಹ

ಬೆಂಗಳೂರು: ಎಸ್ಐಟಿ ವಶಕ್ಕೆ ಯುವತಿಯನ್ನು ಒಪ್ಪಿಸಿಲ್ಲ. ಹೇಳಿಕೆ ಕೊಡಿಸಲು ಕರೆದುಕೊಂಡು ಬರಲಾಗಿದೆ ಎಂದು ಸಿಡಿ ಪ್ರಕರಣದ ಯುವತಿ ಪರ ವಕೀಲ ಜಗದೀಶ್ ಕುಮಾರ್ ಹೇಳಿದ್ದಾರೆ.

ಎಸ್ಐಟಿ ನೋಟಿಸ್ ಹಿನ್ನೆಲೆಯಲ್ಲಿ ಆಡುಗೋಡಿ ಟೆಕ್ನಿಕಲ್ ವಿಂಗ್ ನಲ್ಲಿ ಹೇಳಿಕೆ ಕೊಡಿಸಲು ಕರೆದುಕೊಂಡು ಬರಲಾಗಿದೆ. ಪ್ರಕರಣದ ಸ್ಟೇಟ್ ಮೆಂಟ್ ಗೆ ಮನವಿ ಮಾಡಿದ್ದು, ಯುವತಿಯನ್ನು ಕರೆದುಕೊಂಡು ಬರಲಾಗಿದೆ. ನಮ್ಮ ಕಕ್ಷಿದಾರರನ್ನು ನಾವು ಕರೆದುಕೊಂಡು ಹೋಗುತ್ತೇವೆ. ತಂದೆ, ತಾಯಿ ಕಿಡ್ನಾಪ್ ಕೇಸ್ ದಾಖಲಿಸಿರಬಹುದು. ಈಗ ನಾವು ಯುವತಿಯನ್ನು ಎಸ್ಐಟಿಗೆ ಒಪ್ಪಿಸಿಲ್ಲ ಎಂದು ತಿಳಿಸಿದ್ದಾರೆ.

ಯುವತಿ ಕಂಪ್ಲೆಂಟ್ ಕೊಟ್ಟಿಲ್ಲ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಸರ್ಕಾರ, ಪೊಲೀಸರು ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...