alex Certify ನಾಳೆಯಿಂದ ಶುರು ಅಸಲಿ ಆಟ: ‘ಸಿಡಿ’ಯಲಿದೆ ರಹಸ್ಯ? ಗುಡುಗಿದ ರಮೇಶ ಜಾರಕಿಹೊಳಿ –ಪ್ರಯೋಗವಾಗಲಿದೆ ಬ್ರಹ್ಮಾಸ್ತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ಶುರು ಅಸಲಿ ಆಟ: ‘ಸಿಡಿ’ಯಲಿದೆ ರಹಸ್ಯ? ಗುಡುಗಿದ ರಮೇಶ ಜಾರಕಿಹೊಳಿ –ಪ್ರಯೋಗವಾಗಲಿದೆ ಬ್ರಹ್ಮಾಸ್ತ್ರ

ಬೆಂಗಳೂರು: ರಮೇಶ ಜಾರಕಿಹೊಳಿ ಅವರ ವಿರುದ್ಧ ಯುವತಿ ವಕೀಲರ ಮೂಲಕ ದೂರು ದಾಖಲಿಸಿದ್ದಾರೆ. ಇದಾದ ನಂತರ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ ನಾಳೆಯಿಂದ ನಮ್ಮ ಅಸ್ತ್ರ ಪ್ರಯೋಗಿಸಲಾಗುವುದು ಎಂದು ಹೇಳಿದ್ದಾರೆ.

ಸಿಡಿ ಬಹಿರಂಗವಾದ ನಂತರದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದ್ದ ಪ್ರಕರಣ ಇಂದು ಯುವತಿ ವಕೀಲರ ಮೂಲಕ ದೂರು ನೀಡುತ್ತಿದ್ದಂತೆ ಮತ್ತೊಂದು ತಿರುವು ಪಡೆದುಕೊಂಡಿದೆ. ರಮೇಶ್ ಜಾರಕಿಹೊಳಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅವರು ನಾನು ಜಾಮೀನು ಪಡೆಯುವುದಿಲ್ಲ. ಎಲ್ಲವನ್ನು ಎದುರಿಸುತ್ತೇನೆ ಎಂದು ಹೇಳಿದ್ದಾರೆ. ನಾಳೆಯಿಂದಲೇ ಅಸ್ತ್ರ ಪ್ರಯೋಗಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದು, ಸಿಡಿ ಸೂತ್ರಧಾರರು ಯಾರು ಎನ್ನುವುದನ್ನು ಬಹಿರಂಗ ಪಡಿಸುವ ಸಾಧ್ಯತೆ ಇದೆ.

ಸರ್ಕಾರ ಬೀಳಿಸಿದ್ದಕ್ಕೆ ಇಷ್ಟೆಲ್ಲ ಷಡ್ಯಂತ್ರ ಮಾಡಲಾಗಿದೆ. ಸರ್ಕಾರವನ್ನು ಬೀಳಿಸಿದ ನಮಗೆ ಇದೆಲ್ಲ ಯಾವ ಲೆಕ್ಕ? ನಾಳೆಯಿಂದ ನಮ್ಮ ಅಸ್ತ್ರ ಪ್ರಯೋಗಿಸುತ್ತದೆ ಎಂದು ಗುಡುಗಿದ್ದಾರೆ. ಇಂತಹ ಪ್ರಕರಣಗಳಿಗೆ ಹೆದರುವುದಿಲ್ಲ. ದೂರು ನೀಡಿದವರಿಗೆ ಶಿಕ್ಷೆಯಾಗಲಿದೆ. ನಮ್ಮ ಆಟ ನಾಳೆಯಿಂದ ಶುರುವಾಗಲಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರ ಬೀಳಿಸಿ ಸರ್ಕಾರ ರಚನೆ ಮಾಡುವ ಶಕ್ತಿ ಇದ್ದವರು ನಾವು. ನಾನು ಹೋರಾಟಗಾರ, ಇಂತಹುದಕ್ಕೆ ಹೆದರುವುದಿಲ್ಲ. ಹತ್ತು ವಿಡಿಯೋ ಬಂದರೂ, ದೂರು ದಾಖಲಾದರೂ ನಾನು ಹೆದರುವುದಿಲ್ಲ. ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...