alex Certify BREAKING NEWS: ಹತ್ತಿರದ ಸಂಬಂಧಿ ಪೀಟರ್ ನಿಂದ ಅಮ್ಮನ ಮೇಲೆ ದಾಳಿ; ನಮಗೆ ಗೊತ್ತಿರುವವರಿಂದಲೇ ಹತ್ಯೆ ಎಂದ ರೇಖಾ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಹತ್ತಿರದ ಸಂಬಂಧಿ ಪೀಟರ್ ನಿಂದ ಅಮ್ಮನ ಮೇಲೆ ದಾಳಿ; ನಮಗೆ ಗೊತ್ತಿರುವವರಿಂದಲೇ ಹತ್ಯೆ ಎಂದ ರೇಖಾ ಪುತ್ರ

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಅವರ ಪುತ್ರ ರಾಹುಲ್ ಪ್ರತಿಕ್ರಿಯೆ ನೀಡಿದ್ದು, ನಮಗೆ ಗೊತ್ತಿರುವವರಿಂದಲೇ ನನ್ನ ತಾಯಿಯ ಮೇಲೆ ದಾಳಿ ನಡೆದಿದ್ದು, ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕಿಮ್ಸ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಖಾ ಪುತ್ರ ರಾಹುಲ್, ಫುಡ್ ವಿತರಿಸುತ್ತಿದ್ದ ವೇಳೆ ನಮ್ಮ ತಾಯಿ ಕುತ್ತಿಗೆ ಭಾಗಕ್ಕೆ ಪೀಟರ್ ದಾಳಿ ನಡೆಸಿದ್ದಾನೆ. ಪೀಟರ್ ನಮಗೆ ಹತ್ತಿರದ ಸಂಬಂಧಿ ಕೂಡ ಆಗಬೇಕು. ಜೊತೆಗಿದ್ದುಕೊಂಡೇ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾರೆ.

ನಮ್ಮ ತಂದೆಯ ಜೊತೆ ಪೀಟರ್ ಒಡನಾಟ ಹೊಂದಿದ್ದರು. ತಂದೆ ಹತ್ಯೆ ಬಳಿಕ ನನ್ನನ್ನು ನಮ್ಮ ಅಮ್ಮ ಏರಿಯಾದಿಂದ ದೂರವಿಟ್ಟಿದ್ದರು. ಏರಿಯಾದ ಜನರೊಂದಿಗೆ ಅವರು ವಾಸವಾಗಿದ್ದರು. ಪೀಟರ್ ನಮಗೆ ಸಂಬಂಧಿ ಆತನಿದಲೇ ದಾಳಿ ನಡೆದಿದ್ದಾಗಿ ಘಟನೆ ನಡೆದ ಸ್ಥಳದಲ್ಲಿರುವವರು ಕರೆ ಮಾಡಿ ನಮಗೆ ಹೇಳಿದ್ದಾರೆ ಎಂದಿದ್ದಾರೆ. ಒಟ್ಟಾರೆ ಬಿಬಿಎಂಪಿ ಮಾಜಿ ಸದಸ್ಯೆ ಹತ್ಯೆಯ ಹಿಂದೆ ಕುಟುಂಬದವರು ಹಾಗೂ ಜೊತೆಗಿದ್ದವರ ಕೈವಾಡವೇ ಇದೆ ಎನ್ನಲಾಗುತ್ತಿದ್ದು, ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...