alex Certify BREAKING: ಹಿಮಪಾತದಲ್ಲಿ ಸಿಲುಕಿದ್ದ 7 ಮಂದಿ ಭಾರತೀಯ ಯೋಧರ ಮೃತದೇಹ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹಿಮಪಾತದಲ್ಲಿ ಸಿಲುಕಿದ್ದ 7 ಮಂದಿ ಭಾರತೀಯ ಯೋಧರ ಮೃತದೇಹ ಪತ್ತೆ

ಅರುಣಾಚಲ ಪ್ರದೇಶದಲ್ಲಿ ಭಾನುವಾರ ಹಿಮಕುಸಿತದಲ್ಲಿ ಸಿಲುಕಿದ್ದ ಏಳು ಮಂದಿ ಭಾರತೀಯ ಯೋಧರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಭಾರತೀಯ ಸೇನೆಯು ಇಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿಕೂಲ ಹವಾಮಾನ ಹಾಗೂ ಹಿಮಪಾತದಿಂದಾಗಿದೆ ಎತ್ತರದ ಕಮೆಂಗ್​ ಸೆಕ್ಟರ್​​ನಲ್ಲಿ ಗಸ್ತು ವಾಹನವು ಸಿಲುಕಿಕೊಂಡಿತ್ತು . ಕೂಡಲೇ ಭಾರತೀಯ ಸೇನೆಯ ಗಸ್ತು ವಾಹನಕ್ಕಾಗಿ ಹುಡುಕಾಟ ಆರಂಭವಾಗಿತ್ತು ಎಂದು ಭಾರತೀಯ ಸೇನೆಯು ಮಾಹಿತಿ ನೀಡಿದೆ.

ರಕ್ಷಣಾ ಕಾರ್ಯವನ್ನು ಅತ್ಯಂತ ಚುರುಕುಗತಿಯಲ್ಲಿ ನಡೆಸಲಾಗಿತ್ತಾದರೂ ದುರಾದೃಷ್ಟವಶಾತ್​ ಎಲ್ಲಾ ಏಳು ಮಂದಿ ಭಾರತೀಯ ಸೇನೆಯ ಯೋಧರು ಸಾವನ್ನಪ್ಪಿದ್ದಾರೆ ಎಂದು ಸೇನೆಯು ಅಧಿಕೃತ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...